ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಲಯನ್ಸ್ ಸ್ಕೂಲ್ ಎಜುಕೇಶನ್ ಸೊಸೈಟಿಯಲ್ಲಿ ಹತ್ತು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಜಿ.ಎಸ್.ಎಂ.ಪ್ರಸಾದ್ ಮತ್ತು ಖಜಾಂಚಿಯಾಗಿ ಸೇವೆಗೈದ ಗಿರಿರಾಜ್ ಅವರನ್ನು ಶನಿವಾರ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಶಾಲೆಗೆ ಹೊಸದಾಗಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ವೆಂಕಟೇಶ್ ಹಾಗೂ ಖಜಾಂಚಿಯಾಗಿ ನೇಮಕಗೊಂಡ ಎಸ್.ನಾಗರಾಜು ಕೊಂಗರಹಳ್ಳಿ ಅವರನ್ನು ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಸನ್ಮಾನಿಸಿ ಸ್ವಾಗತಿಸಿದರಲ್ಲದೇ, ಶಾಲೆಯ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಬಾಬು, ನಿಯೋಜಿತ ಅಧ್ಯಕ್ಷ ಬಿ.ಚಿಕ್ಕ ಬಸವಯ್ಯ, ಮೆಂಟರ್ ಪಿ.ಮಂಜುನಾಥ್, ಆಡಳಿತ ಮಂಡಳಿಯ ಸದಸ್ಯರಾದ ಎ.ಡಿ.ಕೃಷ್ಣಕುಮಾರ್, ಎ.ಸತೀಶ್, ಜಯಪ್ರಕಾಶ್ ನಾರಾಯಣ್, ರಾಮಯ್ಯ ಸೇರಿದಂತೆ ಲಯನ್ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
7ಕೆಜಿಎಲ್-3 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ಲಯನ್ಸ್ ಶಾಲೆಯ ನಿರ್ಗಮಿತ ಕಾರ್ಯದರ್ಶಿ ಜಿ.ಎಸ್.ಎಂ.ಪ್ರಸಾದ್ ಮತ್ತು ಖಜಾಂಚಿಯಾಗಿ ಸೇವೆಗೈದ ಗಿರಿರಾಜ್ ಅವರನ್ನು ಶನಿವಾರ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು.