ಪ್ರತಿನಿಧಿ ವರದಿ ಮಂಗಳೂರು
ನಗರದಲ್ಲಿ ಹೆಚ್ಚಾ ಆಯಿತ್ತು ಕ್ರಿಮಿನಲ್ ಗಳ ಕಾಟ. ಉರ್ವದಲ್ಲಿ 4 ಜನರ ತಂಡವು ಮನೆಯನ್ನು ದರೋಡೆ ಮಾಡಿದೆ. ವೃದ್ದರಿದ್ದ ಮನೆ ಲೂಟಿ ಮಾಡಿ ಕಾರು ಸಮೇತ ಎಸ್ಕೇಪ್ ಆಗಿದರೆ.
ಉರ್ವಸ್ಟೋರ್ ಕೋಟೆಕಣಿ ಒಂದನೇ ಕ್ರಾಸ್ ನ ಮನೆಯೊಂದಕ್ಕೆ ಮಂಗಳವಾರ ಮುಂಜಾನೆ ನುಗ್ಗಿದ ಕಳ್ಳರು. ನಗರದಲ್ಲಿ ಕ್ರಮಿನಲ್ ಚಟುವಟಿಕೆ ಹೆಚ್ಚಾಗುತ್ತಿದ್ದು, ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಹಿರಿಯ ನಾಗರಿಕರಿದ್ದ ಮನೆಗೆ ನುಗ್ಗಿ ಬೆದರಿಸಿ ಚಿನ್ನಾಭರಣ ಲೂಟಿ ಮಾಡಲಾಗಿದೆ. ಬಳಿಕ ಮನೆಯಲ್ಲಿ ನಿಲ್ಲಿಸಿದ್ದ ಕಾರಿನೋಡನೆ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ನಸುಕಿನ ಜಾವ 3.30 ಕ್ಕೆ ಉರ್ವ ಕೊಟ್ಟರದ ಮನೆಯಲ್ಲಿ ಈ ದರೋಡೆ ನಡೆದಿದ್ದು, ಕಾರು ಮುಲ್ಕಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಹಿರಿಯ ನಾಗರಿಕರಿದ್ದು, ಅವರ ಮಕ್ಕಳು ವಿದೇಶದಲ್ಲಿ ಇದ್ದಾರೆ. ಇದನ್ನು ಅರಿತೇ ಈ ದರೋಡೆ ನಡೆಸಿರುವ ಸಾದ್ಯತೆ ಇದೆ. ಕಾರಿನಲ್ಲಿ ಮೊಬೈಲ್ ಒಂದು ಪತ್ತೆಯಾಗಿದ್ದು ಪೊಲೀಸರು ತನಿಕೆ ನಡೆಸುತ್ತಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಲೂಟಿ ಮಾಡಿ ಕಾರು ಕೀ ಪಡೆದಿದ್ದಾರೆ ಎಂದು ಮನೆಯವರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿ ಮೊದಿನ ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದರು.