ಪ್ರತಿನಿಧಿ ವರದಿ ತುಮಕೂರು
ಜು.10 ರ ಮದ್ಯ ರಾತ್ರಿ 12:40 ಸುಮಾರಿಗೆ ಹೆಬ್ಬೂರು ಪೊಲೀಸ್ ಠಾಣೆ ಸರಹದ್ದು ಗೂಳೂರು ಹೋಬಳಿ ಅರೇಹಳ್ಳಿ ಗ್ರಾಮದ ತಿರುಮಲ ಹಾಲಿನ ಡೇರಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಅಡದ ಮೇಲೆ ಸಿ.ಇ.ಎನ್ ಠಾಣೆ ಪೊಲೀಸರು ದಾಳಿ ನಡೆಸಿ 14 ಮಂದಿ ಆರೋಪಿಗಳನ್ನು ಬಂಧಿಸಿ ಪಣಕ್ಕಿಟಿದ 11 ಲಕ್ಷ 42,590 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಸನ್ನ ಕುಮಾರ್, ಈಶ್ವರ, ನಾಗರಾಜಪ್ಪ, ಪರಮೇಶ, ಜಯಶೀಲ, ಮಂಜುನಾಥ, ನಟರಾಜು, ಬಸವರಾಜು, ಯಶವಂತ, ಸೋಮಶೇಖರಯ್ಯ, ಯತೀಶ, ಬಸವರಾಜು, ತಿರುಮಲಯ್ಯ, ಸಿದ್ದೇಗೌಡ ಎಂಬುವರನ್ನು ಬಂಧಿಸಲಾಗಿದೆ.
ಪಣಕ್ಕಿಟ್ಟಿದ್ದ 11,42,590 ರೂ.ನಗದು ಹಣ, 17 ಮೊಬೈಲ್ ಫೋನ್ ಗಳು, 3 ಕಾರು ಗಳನ್ನು ಅಮಾನತು ಪಡಿಸಿಕೊಂಡು ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದಾಳಿಯನ್ನು ಸಿ.ಇ.ಎನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಮಕೃಷ್ಣಯ್ಯ. ಸಿ.ಹೆಚ್. ಮತ್ತು ಸಿಬ್ಬಂದಿಗಳಾದ ದ್ವಾರಕೀಶ್, ನಟರಾಜು, ರಾಜ್ ಕುಮಾರ್, ಸೈಮನ್ ವಿಕ್ಟರ್, ಮಾರುತೀಶ್, ರವಿ ಕುಮಾರ ರೆಡ್ಡಿ, ಶಿವಕುಮಾರ್ ಲಮಾಣಿ, ಹರೀಶ್, ಅನಿಲ್ ಕುಮಾರ್, ಕೆ.ಟಿ ನಾರಾಯಣ ರವರುಗಳು ಜೂಜು ಅಡೆ ಮೇಲೆದಾಳಿ ನಡೆಸಿದ್ದರು, ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ.ಪೊಲೀಸರನ್ನು ಪ್ರಶಂಸಿದ್ದಾರೆ.