ರೈತರನ್ನು ತಿರಸ್ಕರಿಸಿದ ರಾಜಕಾರಣಿಗಳ ವಿರುದ್ದ ರೈತರ ಪ್ರತಿಭಟನೆ
ಹಸಿರು ಸೇನೆ ರಾಜ್ಯಾಧ್ಯಕ್ಷ ಹರಳಪುರ ಮಂಜೇಗೌಡ ಆಕ್ರೋಶ
ಪ್ರತಿನಿಧಿ ವರದಿ ದೇವನಹಳ್ಳಿ
ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಸ್ಪಂದಿಸದ ಜನಪ್ರತನಿಧಿಗಳು ರೈತರನ್ನು ಕಾಯಿಸಿ ಅವಮಾನ ಮಾಡಿ ಕಳಿಸಿರುವುದು ಎಷ್ಟು ಸರಿ ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷ ಹರಳಪುರ ಮಂಜೇಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಮೇಲೆ ನಮಗೆ ಗೌರವವಿದೆ, ಆದರೆ ನಮ್ಮ ರೈತರಿಗೆ ಆಗುತ್ತಿರುವ ಅನ್ಯಾಯ, ಅವಮಾನ ಮತ್ತು ತಿರಸ್ಕಾರದ ವಿರುದ್ಧ ಹೋರಾಡಲು ಬಾರ್ ಕೋಲು ಹಿಡಿದು ದಾರಿಗೆ ಇಳೆಯಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ವಿಶ್ವಚೇತನ ರೈತನಾಯಕ ಪ್ರೊ.ಎಂ.ಡಿ.ನಂಜುಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ನೇಮಕ ಮಾಡಿದರು ಹಾಗೂ ಚನ್ನರಾಯಪಟ್ಟಣ ಭೂಸ್ವಾಧೀನ ಸಮಿತಿ ರೈತರಿಗೆ ಬೆಂಬಲ ನೀಡುವ ಕುರಿತು ಸಭೆಯಲ್ಲಿ ಮಾತನಾಡಿದರು.
ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ರೈತರ ಹತ್ತಿರ ಬರುವಾಗ ವಿದ್ಯುತ್ ಸಂಪರ್ಕ, ರಸ್ತೆ-ಸಾರಿಗೆ ಸಂಪರ್ಕ, ನೀರಿನ ಸಂಪರ್ಕಕ್ಕಾಗಿ ಮಾತ್ರ ಸ್ಥಳಾವಕಾಶ ಕೇಳಿ ಬರಬೇಕು ಹೊರತು ಕೈಗಾರಿಕೋದ್ಯಮ, ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಬಂದರೆ ಯಾವುದೇ ಜಾಗ ನೀಡಲು ತಯಾರಿಲ್ಲ. ದೇಶದ ಜನರಿಗೆ ಅನ್ನ ನೀಡುವ ರೈತರ ಮುಗ್ದತೆಯನ್ನು ರಾಜಕಾರಣಿಗಳು ಕಡೆಗಣಿಸಬಾರದು ಎಂದರು.
876 ದಿನಗಳಿಂದ ಚನ್ನರಾಯಪಟ್ಟಣ ಭೂಸ್ವಾಧೀನ ಸಮಿತಿಯ ರೈತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದು ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣ ರೈತರ ಪರವಾಗಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ನೂತನ ಯುವ ಘಟಕದ ಅಧ್ಯಕ್ಷರಾಗಿ ವಿನೋದ್ ಗೌಡ, ಪ್ರಚಾರ ಸಮಿತಿಯ ಕಾರ್ಯಧ್ಯಕ್ಷರಾಗಿ ಶಂಕರೇಗೌಡ್ರು ನೇಮಕಗೊಂಡಿದ್ದಾರೆ. ತಾಲೂಕಿನಲ್ಲಿರುವ ರೈತರ ಬಂಡಿದಾರಿಗಳನ್ನು ಒತ್ತುವರಿ ತೆರುವು ಮಾಡದ ಅಧಿಕಾರಗಳು ವಿರುದ್ಧ ಕ್ರಮ ವಹಿಸುವಂತೆ ಜಿಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಸಿದರು.
ರಾಜ್ಯ ಕಾರ್ಯಧ್ಯಕ್ಷ ಡಾ.ಎನ್.ಚಂದ್ರಶೇಖರ್, ಕಾರ್ಯದರ್ಶಿ ಚಂದ್ರಶೇಖರ್ ವಿ.ಎಂ(ಸಾಹುಕಾರ್), ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಕೃಷ್ಣಪ್ಪ, ಚನ್ನರಾಯಪಟ್ಟಣ ಭೂ ಸ್ವಾಧೀನ ಸಮಿತಿಯ ಮುಖಂಡ ನಂಜೇಗೌಡ್ರು ಸೇರಿದಂತೆ ಹಲವು ರೈತ ಸದಸ್ಯರು ಮತ್ತಿತರರು ಇದ್ದರು.
11ಡಿಎಚ್ಎಲ್ ಪಿ -೩: ಸಭೆಯಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ನೂತನ ಯುವ ಘಟಕದ ಅಧ್ಯಕ್ಷರಾಗಿ ವಿನೋದ್ ಗೌಡ ಮತ್ತು ಪ್ರಚಾರ ಸಮಿತಿಯ ಕಾರ್ಯಧ್ಯಕ್ಷರಾಗಿ ಶಂಕರೇಗೌಡ್ರು ರಿಗೆ ರಾಜ್ಯಧ್ಯಕ್ಷ ಹರಳಪುರ ಮಂಜೇಗೌಡ ನೇಮಕಪತ್ರ ಪ್ರಧಾನ ಮಾಡಲಾಯಿತು.