ರೈತರು ಮುಖ್ಯಮಂತ್ರಿಗಳ ಮನೆಗೋ ಅಥವಾ ಜೈಲಿಗೋ
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಧ್ಯಕ್ಷ ಬಿ.ಸಿ.ಬೈಯಾರೆಡ್ಡಿ ಆಕ್ರೋಶ
ಪ್ರತಿನಿಧಿ ವರದಿ ದೇವನಹಳ್ಳಿ
ಜು.22ರಂದು ವಿಧಾನ ಸಭೆಯಲ್ಲಿ ಕಲಾಪ ನಡೆಯುತ್ತಿದ್ದು, ಅಂದು ರಾಜ್ಯ ಮಟ್ಟದ ಭೂಸ್ವಾಧೀನ ವಿರೋಧಿ ಹೋರಾಟವನ್ನು ನಡೆಸುವುದಾಗಿ ರೈತರು ಸಭೆ ನಡೆಸಿದರು. ಮುಖ್ಯಮಂತ್ರಿಗಳ ಮನೆಗೆ ಜಾಥಾ ತೆರಳುವುದಾಗಿ ತಿಳಿಸಿದರು.
ಭೂಸ್ವಾಧೀನ ವಿರೋಧಿ ಹೋರಾಟ ರೈತರು ಮುಖ್ಯಮಂತ್ರಿಗಳ ಮನೆಗೋ ಅಥವಾ ಜೈಲಿಗೋ ಎಂಬುದನ್ನು ರಾಜ್ಯ ಸರ್ಕಾರದ ಅಯ್ಕೆಗೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಧ್ಯಕ್ಷ ಬಿ.ಸಿ.ಬೈಯಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಅವಮಾನಿಸಿದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಈ ಕೂಡಲೇ ರಾಜಿನಾಮೆ ನೀಡಬೇಕು. ರಾಜ್ಯ ಸರ್ಕಾರ ಭೂಸ್ವಧೀನವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಹಸಿರು ಸೇನೆ, ಕನ್ನಡಪರ ಸಂಘಟನೆ ಇನ್ನೂ ಹಲವಾರು ಸಂಘಟನೆಗಳು ಬೆಂಬಲದೊಂದಿಗೆ ರೈತ ಮಹಿಳೆಯರು ಸೇರಿದಂತೆ 5 ಸಾವಿರ ಹೋರಾಟಗಾರರು ಚನ್ನರಾಯಪಟ್ಟಣ ರೈತರಿಗೆ ಬೆಂಬಲಿಸಿ ಶಾಂತಿಯುತವಾಗಿ ನ್ಯಾಯಕ್ಕಾಗಿ ಹೋರಾಟ ಮಾಡಲಿದ್ದೇವೆ. ಭೂ ಸ್ವಾಧೀನ ಇದೇ ರೀತಿ ಮುಂದೆವರೆದರೆ ಮುಂದಿನ 20 ವರ್ಷಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೃಷಿ ಭೂಮಿ ಉಳಿಯುವುದಿಲ್ಲ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತದೆ ಎಂದು ನಮ್ಮ ಭೂಮಿ ನಮ್ಮ ಹಕ್ಕು ಎಂದು ಅಗ್ರಹಿಸಿದರು.
ಕೋಟ್
ಭೂಸ್ವಾಧೀನಕ್ಕೆ ಅಧಿಸೂಚಿತ ಮುರುಗೇಶ್ ನಿರಾಣಿ ಒಬ್ಬ ಮುಟ್ಟಾಳ ಹಾಗೂ ಹೀಗಿರುವ ಎಂ.ಬಿ.ಪಾಟೀಲ್ ಅವರಪ್ಪನಂತೆ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತ-ಮುತ್ತ ಶನಿಗಳ ಕಾಟದಿಂದ ಅವರ ರೈತ ವಿರೋಧಿ ನಿರ್ಧಾರಕ್ಕೆ ಕಾರಣಕರ್ತರು.
– ಬಿ.ಸಿ.ಬೈಯಾರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಧ್ಯಕ್ಷ
ಸಾಮೂಹಿಕ ರೈತ ಸಂಘದ ಮುಖಂಡರು ಚುಕ್ಕಿ ನಂಜುಡಸ್ವಾಮಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಹಸಿರು ಸೇನೆಯ ಯುವಕರ ಘಟಕದ ರಾಜ್ಯಾಧ್ಯಕ್ಷ ವಿನೋದ್ ಕುಮಾರ್ ಗೌಡ, ಶಾಶ್ವತ ನೀರಾವರಿ ಸಂಘಟನೆಯ ಆಂಜನೇಯ ರೆಡ್ಡಿ, ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷ ಮಾರೇಗೌಡ, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ನಲ್ಲಪ್ಪನಹಳ್ಳಿ ನಂಜಪ್ಪ, ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್, ರೈತ ಹೋರಾಟ ಮುಖಂಡರಾದ ತಿಮ್ಮರಾಯಪ್ಪ, ಪ್ರಮೋದ್, ರಮೇಶ್, ಮುಕಂದ್, ಅಶ್ವಥಪ್ಪ, ವೆಂಕಟರಮಣಪ್ಪ ಸೇರಿದಂತೆ ಹಲವಾರು ರೈತ ಹೋರಾಟಗಾರರು ಭಾಗವಹಿಸಿದ್ದರು.