ಪ್ರತಿನಿಧಿ ವರದಿ ಕೆ.ಎಂ.ದೊಡ್ಡಿ
ಕೆ.ಶೆಟ್ಟಹಳ್ಳಿ ಗ್ರಾಪಂಗೆ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಕರಡಕೆರೆ ಗ್ರಾಮದ ಮೈನಾವತಿ ಅಧ್ಯಕ್ಷರಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಪೂರ್ಣಿಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೈನಾವತಿ ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸಿದೆ ಇರುವ ಕಾರಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಕ್ಷರ ದಾಸೋಹ ತಾಲೂಕು ಅಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರುಗಳಾದ ಪೂರ್ಣಿಮಾ, ಸುಧಾ, ಜ್ಯೋತಿ, ಲಕ್ಷ್ಮಮ್ಮ, ಹೇಮಾವತಿ, ಗೀತಾ, ಸುರೇಂದ್ರ ಸತೀಶ್, ಸುಂದರೇಶ್, ತಮ್ಮೇಗೌಡ, ಸುರೇಶ್, ಸಿದ್ದಪ್ಪ, ಮುಖಂಡರಾದ ಕರಡಕೆರೆ ಯೋಗೇಶ್ ಶಂಕರೇಗೌಡ, ಬೊಮ್ಮೇಗೌಡ ಸಿದ್ದರಾಮಯ್ಯಗೌಡ, ಅಂಗಡಿಶೇಖರ್, ಹನುಮಂತೇಗೌಡ, ಮರಿಸ್ವಾಮಿಗೌಡ ಕುಳೇಗೌಡ, ಬೈರೇಗೌಡ ಅಭಿನಂದಿಸಿದರು.
———–
೧೬ಏಒಆ-೨: ಕೆ.ಶೆಟ್ಟಹಳ್ಳಿ ಗ್ರಾಪಂಗೆ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಕರಡಕೆರೆ ಗ್ರಾಮದ ಮೈನಾವತಿ ಅಧ್ಯಕ್ಷರಾಗಿ ಆಯ್ಕೆಯಾದರು.
=================