ಪ್ರತಿನಿಧಿ ವರದಿ ಕಿಕ್ಕೇರಿ
ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾ.ಘಟಕದ ನಿದೇರ್ಶಕರ ಚುನಾವಣೆಗಾಗಿ ವಿ.ಎಸ್.ಧನಂಜಯಕುಮಾರ್ ತಂಡ ಮನೆ-ಮನೆಗೆ ತೆರಳಿ ಬಿರುಸಿನ ಮತಯಾಚನೆ ನಡೆಸಿದರು.
ಹೋಬಳಿಯ ಕೆಂಪಿಕೊಪ್ಪಲು, ಗೋವಿಂದನಹಳ್ಳಿ, ಗೋವಿಂದನಹಳ್ಳಿಕೊಪ್ಪಲು, ಜಯಪುರ ಮತ್ತಿತರ ಗ್ರಾಮಗಳಲ್ಲಿ ಮಂಗಳವಾರ ನಡೆಸಿದ ಮತಯಾಚನೆ ವೇಳೆ ನಿರ್ದೇಶಕ ಸ್ಥಾನದ ಅಭ್ಯರ್ಥಿ ರಾಜಶೇಖರ್ ಮಾತನಾಡಿ, ವಿ.ಎಸ್. ಧನಂಜಯಕುಮಾರ್ ಸಮಾಜಮುಖಿ ಸೇವೆ ಸಹಿಸದೆ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ. ವದಂತಿಗೆ ಕಿವಿಗೊಡದಿರಿ. ಸಮಾಜದ ಅಭಿವೃದ್ಧಿಗಾಗಿ ಇವರ ನೇತೃತ್ವದ ತಂಡ ಶ್ರಮಿಸಲು ಬದ್ಧವಿದೆ. ಇದೇ ಜು. ೨೧ರ ಭಾನುವಾರ ಚುನಾವಣೆ ನಡೆಯಲಿದೆ. ವಕೀಲ ವಿ.ಎಸ್. ಧನಂಜಯಕುಮಾರ್ ತಮ್ಮ ಅಧ್ಯಕ್ಷ ಸ್ಥಾನ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದು ಮತ್ತೊಮ್ಮೆ ತಾ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಕೋವಿಡ್ ವೇಳೆ ಆಹಾರ ಕಿಟ್, ಔಷಧ ಕಿಟ್ ನೀಡಿದ್ದಾರೆ. ಸಮಾಜದ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ದುರ್ಬಲರಿಗೆ ಸಹಾಯ ಮಾಡಿದ್ದಾರೆ. ಇವರ ನೇತೃತ್ವದಲ್ಲಿ ಸ್ಪರ್ಧಿಸಿರುವ ತಂಡದ ಸದಸ್ಯರಿಗೆ ಮತ ನೀಡಿ. ಮತ್ತಷ್ಟು ಸಮಾಜದ ಏಳ್ಗೆ, ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.
ತಾ.ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಕೀಲ ವಿ.ಎಸ್.ಧನಂಜಯಕುಮಾರ್, ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ತಾಳಶಾಸನ ಆನಂದ, ನಿರ್ದೇಶಕ ಸ್ಥಾನದ ಅಭ್ಯರ್ಥಿ ಬಸವಲಿಂಗಪ್ಪ, ಉಮೇಶ್, ಕುಮಾರ್, ದೊಡ್ಡರಾಮಪ್ಪ, ಕುಮಾರ್, ನಿಂಗರಾಜಪ್ಪ, ಮಹದೇವಪ್ಪ, ರೇವಣ್ಣ, ವೀರಭದ್ರಪ್ಪ, ಶಿವಪ್ಪ, ಡಿ.ಎ.ಶಿವಪ್ಪ, ಶಿವಮೂರ್ತಿ, ಸೋಮಪ್ಪ, ಪವಿತ್ರ, ಮಂಜುಳಾ, ಮೀನಾಕ್ಷಿ, ಲೀಲಾವತಿ, ಯಶೋಧ, ರಾಜಮಣಿ, ಮುಖಂಡ ಅಶೋಕ್, ಡೇರಿ ಮಹೇಶ್, ಕೇಬಲ್ ಗುಂಡ, ಪ್ರಕಾಶ್, ಕುಮಾರ್, ಮಹದೇವು ಭಾಗವಹಿಸಿದ್ದರು.
೧೬ಕೆಕೆಆರ್೧: ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಪದಾಧಿಕಾರಿಗಳ ಚುನಾವಣಗೆ ವಿ.ಎಸ್. ಧನಂಜಯಕುಮಾರ್ ತಂಡ ಮಂಗಳವಾರ ಮತಯಾಚನೆ ಮಾಡಿದರು. ರಾಜಶೇಖರ್, ತಾಳಶಾಸನ ಆನಂದ, ಬಸವಲಿಂಗಪ್ಪ, ಉಮೇಶ್, ಕುಮಾರ್, ಮಹದೇವಪ್ಪ, ಗುಂಡ, ಪ್ರಕಾಶ್ ಭಾಗವಹಿಸಿದ್ದರು.