ಪ್ರತಿನಿಧಿ ವರದಿ ಪಾಂಡವಪುರ
ಭಾರತೀಯ ಜನತಾ ಪಾರ್ಟಿಯ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರನ್ನಾಗಿ ಪಾಂಡವಪುರ ತಾಲೂಕಿನ ಬಿಜೆಪಿ ಯುವ ಮುಖಂಡ ಬಿಂಡಹಳ್ಳಿ ಬಿ.ಎಚ್.ಉದಯಕುಮಾರ್ ಅವರನ್ನು ಶಿಕ್ಷಣ ಪ್ರಕೋಷ್ಟ ಸಮಿತಿಯ ಮೈಸೂರು ವಿಭಾಗದ ರಾಜ್ಯ ಸಂಚಾಲಕ ಡಾ.ಶಶಿಧರ್ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ಪ್ರಕೋಷ್ಠದ ರಾಜ್ಯ ಸಂಯೋಜಕ ದತ್ತಾತ್ರಯ, ಸಹ ಸಂಯೋಜಕ ಪುನೀತ್, ಎಂಎಲ್ಸಿ ರವಿಕುಮಾರ್, ಸಹ ಸಂಚಾಲಕ ಎಂ.ಜಿ.ಭಟ್ ಸಮ್ಮುಖದಲ್ಲಿ ಪಾಂಡವಪುರ ತಾಲೂಕಿನ ಬಿಂಡಹಳ್ಳಿ ಉದಯಲುಮಾರ್ ಅವರಿಗೆ ಪಕ್ಷದ ಸಂಘಟನೆ, ಜವಾಬ್ದಾರಿ ವಹಿಸಿ, ಭಾರತೀಯ ಜನತಾ ಪಾರ್ಟಿಯ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ, ಆದೇಶ ಪತ್ರ ವಿತರಿಸಿದರು.
ಬಿಜೆಪಿ ಯುವ ಮುಖಂಡ ಉದಯಕುಮಾರ್ ಅವರು, ಕಳೆದ 25 ವರ್ಷದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿ ತಳಮಟ್ಟದಲ್ಲಿ ಸಂಘಟನೆ ಮಾಡಿ ಸೇವೆ ಸಲ್ಲಿಸಿದ್ದಾರೆ. ಇವರ ಸಂಘಟನೆಯನ್ನು ಗುರುತಿಸಿದ ಪಕ್ಷದ ನಾಯಕರು ಸಂಘಟನೆ ಮಾಡುವ ಜವಾಬ್ದಾರಿ ನೀಡಿದ್ದಾರೆ.