ನದಿಪಾತ್ರಕ್ಕೆ ಜನ ಜಾನುವಾರು ತೆರಳದಂತೆ ಕಟ್ಟೆಚ್ಚರ
ಅಧಿಕಾರಿಗಳ ಸೂಚನೆ
ಪ್ರತಿನಿಧಿ ವರದಿ ಕಿಕ್ಕೇರಿ
ಸಮೀಪದ ಮಂದಗೆರೆ ಬಳಿಯ ಹೇಮಾವತಿ ನದಿ ಪ್ರವಾಹದಂತೆ ಉಕ್ಕಿ ಹರಿಯುತ್ತಿದ್ದು, ಜನ ಜಾನುವಾರುಗಳನ್ನು ನದಿಪಾತ್ರದ ಬಳಿ ತೆರಳದಂತೆ ಕಟ್ಟೆಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಹೇಮಾವತಿ ನದಿಯ ಗೊರೂರು ಅಣೆಕಟ್ಟನಿಂದ ೩೦ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದ್ದು, ಪ್ರವಾಹದಂತೆ ನೀರು ಹರಿದು ಬರುತ್ತಿದೆ. ಗೊಂದಿಹಳ್ಳಿ, ದಬ್ಬೇಘಟ್ಟ, ಮಾದಾಪುರ, ಚಿಕ್ಕಮಂದಗೆರೆ, ಶ್ರವಣೂರು, ಹೇಮಗಿರಿ, ಬಂಡಿಹೊಳೆ, ನಾಟನಹಳ್ಳಿ, ಅಕ್ಕಿಹೆಬ್ಬಾಳು ಮತ್ತಿತರ ತಾಲೂಕಿನ ಪ್ರದೇಶಗಳಲ್ಲಿ ಹೇಮಾವತಿ ನದಿ ಹರಿಯುತ್ತಿದೆ.
ನೀರಿನ ಒಳಹರಿವು ಮೇಲ್ಭಾಗದಲ್ಲಿ ಹೆಚ್ಚಾಗಿದ್ದು, ಅಣೆಕಟ್ಟಿನಿಂರ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ನದಿ ದಂಡೆಯ ರೈತರು ಎಚ್ಚರಿಕೆಯಿಂದ ಇರಬೇಕಿದೆ. ನದಿಯಲ್ಲಿ ಸ್ನಾನ, ಈಜುವುದು, ಜಾನುವಾರು ತೊಳೆಯುವುದು, ನೀರು ಕುಡಿಸುವುದು ಮಾಡಬಾರದು. ಯುವಕರು ಸೆಲ್ಪಿ ತೆಗೆದುಕೊಳ್ಳಲು ನದಿಪಾತ್ರಕ್ಕೆ ತೆರಳಬಾರದು ಎಂದು ಮನವಿ ಮಾಡಿದ್ದಾರೆ.
ಇನ್ಸ್ಪೆಕ್ಟರ್ ರೇವತಿ ನದಿಪಾತ್ರದಲ್ಲಿರುವ ಮನೆ, ಮೀನುಗಾರರು ಬಳಿ ತೆರಳಿ ನದಿಗೆ ತೆರಳದಂತೆ ತಿಳಿ ಹೇಳಿದರು. ಅಲ್ಲಲ್ಲಿ ಮುನ್ನೆಚ್ಚರಿಕೆಯ ಫ್ಲೆಕ್ಸ್ಫಲಕ ಅಳವಡಿಸಿ ಪೊಲೀಸರು ಗಸ್ತು ತಿರುಗುವ ಮೂಲಕ ಮನವರಿಕೆ ಮಾಡಲಾಗುತ್ತಿದೆ.
ಹೇಮಾವತಿ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆನಂದ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್, ಕಿಕ್ಕೇರಿ ಇನ್ಸ್ಪೆಕ್ಟರ್ ರೇವತಿ, ದಬ್ಬೇಘಟ್ಟ ಗ್ರಾಪಂ ಪಿಡಿಒ ಉಮಾಶಂಕರ್, ಮಂದಗೆರೆ ಪಿಡಿಒ ಸುವರ್ಣ, ಎಎಸ್ಐ ರಮೇಶ್, ಶಿವಲಿಂಗಯ್ಯ, ಎಇಇ ವಿಶ್ವನಾಥ್, ರಾಘವೇಂದ್ರ, ಮೋಹನ್ಕುಮಾರ್, ಎಚ್.ಡಿ. ನಾಯಕ ಇದ್ದರು.
೨೦ಕೆಕೆಆರ್೧: ಕಿಕ್ಕೇರಿ ಸಮೀಪದ ಮಂದಗೆರೆಯಲ್ಲಿರುವ ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವ ನೋಟ.