ಪ್ರತಿನಿಧಿ ವರದಿ ನಾಗಮಂಗಲ
ಜು.22 ರಂದು ಗುಡ್ಡನಹಳ್ಳಿ ಮತ್ತು ಬೋಗಾದಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಗುಡ್ಡನಹಳ್ಳಿ ಮತ್ತು ಬೋಗಾದಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲ ಚೀಣ್ಯ ಎನ್.ಜೆ.ವೈ, ಸಾಮಕಹಳ್ಳಿ ಎನ್.ಜೆ.ವೈ. ಕಾಂತಾಪುರ ಎನ್.ಜೆ.ವೈ, ಚೀಣ್ಯ ಗ್ರಾಪಂ ವ್ಯಾಪ್ತಿ, ಹೊಣಕೆರೆ ಗ್ರಾಪಂ ವ್ಯಾಪ್ತಿ, ಬ್ರಹ್ಮದೇವರಹಳ್ಳಿ ಗ್ರಾಪಂವ್ಯಾಪ್ತಿ, ಮಣ್ಣಹಳ್ಳಿ ಗ್ರಾಪಂ ವ್ಯಾಪ್ತಿ, ಕಾಂತಾಪುರ ಗ್ರಾಪಂ ವ್ಯಾಪ್ತಿ ಮತ್ತು ಬೋಗಾದಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಹಾಗೂ ಸದರಿ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲ ಎನ್.ಜೆ.ವೈ ಹಾಗೂ ಐ.ಪಿ 11 ಕೆ.ವಿ ಮಾರ್ಗಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ಚಾವಿಸನಿನಿ ಕಾರ್ಯ ಮತ್ತು ಪಾಲನೆ ಉಪವಿಭಾಗದಿಂದ ಕೋರಿದ್ದಾರೆ.