ಪ್ರತಿನಿಧಿ ವರದಿ ಮದ್ದೂರು
ರಾಷ್ಟ್ರೀಯ ಹೈನುಗಾರಿಕೆ ಮಹಾಮಂಡಳಿಯು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಸಹಕಾರಿಯಾಗುವ ನಿಟ್ಟಿನಲ್ಲಿ ಅಭಿವೃದ್ದಿಪಡಿಸಿರುವ ನೂತನ ತಂತ್ರಾಂಶ ಕಾಮನ್ ಸಾಪ್ಟ್ ವೇರ್ನ ಉಪಯುಕ್ತತೆ ಕುರಿತು ಸಂಘಟನೆಗಳ ಪ್ರಮುಖರಿಗೆ ಮಾಹಿತಿ ನೀಡಲು ಕೊಪ್ಪದ ಶ್ರೀ ಯಾಂರ್ಬಯರ್ ಮಠದಲ್ಲಿ ಜು.22 ರಂದು ಮಧ್ಯಾಹ್ನ 3 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಪ್ರಗತಿಪರ ಸಂಘಟನೆಯ ಸಂಚಾಲಕ ಸಿ.ಎಂ.ಕ್ರಾಂತಿಸಿಂಹ ತಿಳಿಸಿದ್ದಾರೆ.
ರಾಜ್ಯದ್ಯಾಂತ ಜಾರಿಗೆ ಬಂದಿರುವಾ ಕಾಮನ್ ಸಾಪ್ಟ್ ವೇರ್ ಬಳಸಿ ಆಟೊಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ ನಡಿ ಹಾಲು ಸಂಗ್ರಹ ಹಾಗು ಹಾಲಿನ ಲೆಕ್ಕ ನಿರ್ವಹಣೆ ಪದ್ದತಿಯನ್ನು ಆನ್ ಲೈನ್ ವ್ಯವಸ್ಥೆಯಡಿ ಜಿಲ್ಲೆಯಲ್ಲಿ ಜಾರಿಗೆ ತರಲು ಮುಂದಾಗಿರುವಾ ಮನ್ ಮುಲ್ ಕ್ರಮದ ಹಿನ್ನಲೆಯಲ್ಲಿ ಈ ಸಭೆ ಏರ್ಪಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮನ್ ಸಾಪ್ಟ್ ವೇರ್ ನ ಬಳಕೆ ಗುಣಮಟ್ಟದ ಹಾಲು ಉತ್ಪಾದನೆಗೆ ಪ್ರೇರಣಾತ್ಮಕವು ಸಂಘದ ಆಡಳಿತ ಮತ್ತು ಲೆಕ್ಕ ನಿರ್ವಹಣೆಯಲ್ಲಿ ನಿಖರತೆಯನ್ನು ತಂದು ಉತ್ಪಾದಕ ಹಾಗೂ ಸಂಘದ ನಡುವೆ ಮತ್ತಷ್ಠು ನಂಬುಗೆಯ ವೃದ್ದಿಗೆ ಪೂರಕವಾಗಿಹ ನೂತನ ಪದ್ದತಿ ಕುರಿತು ಮಾಹಿತಿ ಹಂಚಿಕೆ ಮೂಲಕ ಮತ್ತಷ್ಠು ಸ್ಪಷ್ಠತೆ ಮೂಡಿಸುವುದು ಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಸಭೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೆಶಕರು ಮತ್ತು ಸಹಕಾರಿ ಬಂಧುಗಳು ಮಹಿಳಾ ಹಾಗೂ ಸ್ತ್ರೀ ಶಕ್ತಿ ಸಂಘಗಳ ಮುಖ್ಯಸ್ಥರು ಗ್ರಾಪಂ ನ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು, ರೈತಸಂಘಟನೆ, ದಲಿತ ಸಂಘಟನೆ, ಕನ್ನಡಪರ ಸಂಘಟನೆ, ಹಾಲು ಉತ್ಪಾದಕರು ಮತ್ತು ಪ್ರಗತಿಪರರು ಹಾಲಿನ ಡೇರಿ ಅಭಿವೃದ್ಧಿಪರರು ಆಗಮಿಸಿ ಕಾಮನ್ ಸಾಪ್ಟ್ವೇರ್ ಬಳಕೆ ಮತ್ತು ಉಪಯುಕ್ತತೆ ಕುರಿತು ತಿಳಿದುಕ್ಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಪೋಟೋ: ಸಿ.ಎಂ.ಕ್ರಾಂತಿಸಿಂಹ