ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ
ಕಿಕ್ಕೇರಿಯಲ್ಲಿ ಎಚ್ಡಿಕೆಗೆ ಭವ್ಯ ಸ್ವಾಗತ
ಪ್ರತಿನಿಧಿ ವರದಿ ಕಿಕ್ಕೇರಿ
ಜಿಲ್ಲೆಯ ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ತನ್ನ ಮೇಲೆ ಇಟ್ಟಿರುವ ಪ್ರೀತಿಯ ಋಣ ತೀರಿಸಲು ಸ್ವಲ್ಪ ಸಮಯ ಕೊಡಿ ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ.
ಭಾನುವಾರ ಪಟ್ಟಣದ ಮೂಲಕ ಕೆ.ಆರ್.ಪೇಟೆ ತಾಲೂಕು ಕೇಂದ್ರಕ್ಕೆ ತೆರಳುವಾಗ ಜೆಡಿಎಸ್ ಕಾರ್ಯಕರ್ತರರು ಗ್ರಾಮಸ್ಥರ ಪರವಾಗಿ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.
ಹೋಬಳಿಯ ಗಡಿ ಭಾಗವಾದ ಆನೆಗೊಳದಲ್ಲಿ ರೈತಾಪಿ ಜನತೆ ರಸ್ತೆ ಇಕ್ಕೆಲ ನಿಂತು ಸ್ವಾಗತಿಸಿ ಹರಸಿದ ಕ್ಷಣ ಕಣ್ತುಂಬಿದೆ. ತಮ್ಮ ಪ್ರೀತಿಯನ್ನು ಸ್ವಾರ್ಥಕ್ಕೆ ದುರುಪಯೋಗಿಸಿಕೊಳ್ಳಲಾರೆ. ಹಣಬಲದ ನಡುವೆ ಪ್ರೀತಿ ದೊಡ್ಡದಾಗಿ ಪಕ್ಷಾತೀತವಾಗಿ ತನ್ನ ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿ ಮಂತ್ರಿ ಮಾಡಿರುವಿರಿ. ತಾಲೂಕಿನ ಅಭಿವೃದ್ಧಿಗೆ, ನಿರುದ್ಯೋಗ ಸಮಸ್ಯೆಗಳಿಗೆ ಒತ್ತು ನೀಡುವೆ ಎಂದರು.
ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಬಾರಿ ಗಾತ್ರದ ಹೂವಿನ ಹಾರವನ್ನು ಕ್ರೇನ್ ಮೂಲಕ ಕೇಂದ್ರ ಸಚಿವರಿಗೆ ಹಾಕಿ ಜೈಕಾರ ಹಾಕಿದರು. ಪಟಾಕಿ ಸಿಡಿಸಿ, ಪುಷ್ಪಮಾಲೆ ಹಾಕಿ ಖುಷಿಪಟ್ಟರು.
ಕೆ.ಆರ್. ಪೇಟೆ ಶಾಸಕ ಎಚ್.ಟಿ.ಮಂಜು, ಶ್ರವಣಬೆಳಗೊಳ ಕ್ಷೇತ್ರ ಶಾಸಕ ಸಿ.ಎನ್.ಬಾಲಕೃಷ್ಣ, ಹಾಸನ ಶಾಸಕ ಸ್ವರೂಪ್, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷ ಎಸ್.ಕೆ.ಬಾಲಕೃಷ್ಣ, ಕಾಯಿ ಮಂಜೇಗೌಡ, ಶೇಖರ್, ಐನೋರಹಳ್ಳಿ ಮಲ್ಲೇಶ್, ಕಡಹೆಮ್ಮಿಗೆ ರಮೇಶ್, ಕುಮಾರ್, ಅಂಕನಹಳ್ಳಿ ಮಂಜೇಗೌಡ, ಅಶ್ವಿನ್ಕುಮಾರ್ ಹಾಜರಿದ್ದರು.
೨೧ಕೆಕೆಆರ್೧: ಕಿಕ್ಕೇರಿ ಮಾರ್ಗವಾಗಿ ಕೆ.ಆರ್.ಪೇಟೆಗೆ ಭಾನುವಾರ ತೆರಳಿದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಮುಖಂಡರು ಭಾನುವಾರ ಗ್ರಾಮಸ್ಥರ ಪರವಾಗಿ ಗೌರವಿಸಿದರು.