ಪ್ರತಿನಿಧಿವರದಿ ಮಳವಳ್ಳಿ
ಪಟ್ಟಣದ ಅನಂತರಾಮ್ ವೃತ್ತದ ಮದ್ದರು ರಸ್ತೆ ಬದಿಯಲ್ಲಿರುವ ಮೂರಂತಸ್ತಿನ ಬೇಕರಿ ಕಟ್ಟಡದಲ್ಲಿ ಭಾನುವಾರ ಬೆಳಗಿನಜಾವ ಅಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತಗಳು ಸುಟ್ಟು ಕರಕಲಾಗಿವೆ.
ಪಟ್ಟಣದ ಹರ್ಷ ಎಂಬುವರ ಮಾಲೀಕತ್ವದ ವೈಷ್ಣವಿ ಐಯ್ಯಂಗಾರ್ ಬೇಕರಿ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದ್ದು, ಕಳೆದ ರಾತ್ರಿ ಹತ್ತಾರು ಕಾರ್ಮಿಕರು ಕೆಲಸ ಮಾಡುವ ಬೇಕರಿಯ ಬಾಗಿಲು ಮುಚ್ಚಿಕೊಂಡು ತೆರಳಿದ್ದರು.
ಬೆಳಿಗ್ಗೆ ಎಂದಿನಂತೆ ಬೇಕರಿ ಓಪನ್ ಗೆ ಬಂದಾಗ ಕಟ್ಟಡದ ಒಳಗಿದ್ದ ಯಂತ್ರಗಳು, ಬೇಕರಿ ತಿನಿಸುಗಳು ಹಾಗೂ ಇತರೆ ಸಾಮಾಗ್ರಿಗಳು ಬೆಂಕಿಗೆ ಹೊತ್ತಿ ಹುರಿಯುತ್ತಿದ್ದವು. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆಮಾಡಲಾಗಿ ಬೆಂಕಿ ನಂದಿಸಲು ವಾಹನ ಆಗಮಿಸುಷ್ಟರಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಇದರ ಪರಿಣಾಮ ಸುಮಾರು 50 ಲಕ್ಷಕ್ಕೂ ಹೆಚ್ಚು ರೂ. ನಷ್ಟವಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಬೆಂಕಿ ಅವಾಂತರದಿಂದ ಅಕ್ಕ-ಪಕ್ಕದ ಕಟ್ಟಡಗಳಿಗೆ ಯಾವುದೇ ನಷ್ಟವಾಗಿಲ್ಲ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
21 ಎಂಎಲ್ವಿ 1/1: ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯರಸ್ತೆ ಬದಿಯಲ್ಲಿರುವ ಬೇಕರಿ ಕಟ್ಟಡದಲ್ಲಿ ಭಾನುವಾರ ಬೆಳಗಿನಜಾವ ಕಾಣಿಸಿಕೊಂಡು ಲಕ್ಷಾಂತರ ರೂ.ಬೆಲೆ ಬಾಳುವ ವಸ್ತಗಳು ಸುಟ್ಟು ಕರಕಲಾಗಿವೆ.