ರಾಜ್ಯಮಟ್ಟದ ಮಾಧ್ಯಮ ಹಬ್ಬ
ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಂಭ್ರಮ
ಪ್ರತಿನಿಧಿ ವರದಿ ಮೈಸೂರು
ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಜು.23 ಮತ್ತು 24 ರಂದು ಜರ್ನೋತ್ರೀ-24 ಮಾನಸ ಮಾಧ್ಯಮ ಹಬ್ಬವನ್ನು ಆಯೋಜಿಸಲಾಗಿದೆ.
ಮೊದಲ ದಿನ ಬೆಳಗ್ಗೆ 10ಕ್ಕೆ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ, ಮೈಸೂರು ವಿವಿ ಯೋಜನೆ ಮೇಲುಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ.ಎನ್.ನಾಗರಾಜ್ ಆಗಮಿಸಲಿದ್ದಾರೆ.
ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕುಶಾಲ್ ಕುಮಾರ್, ಹಿರಿಯ ಪತ್ರಕರ್ತರಾದ ದಾ.ಕೋ.ಹಳ್ಳಿ ಚಂದ್ರಶೇಖರ್, ಶಾಂತಲಾ ಧರ್ಮರಾಜ್, ಆರ್.ಪಿ.ಜಗದೀಶ್, ಪ್ರೀತಿ ನಾಗರಾಜ್ ಅವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ನಂತರ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳು ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ. ಸಂಜೆ 5:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲಿದು, ಕನ್ನಡದ ಖ್ಯಾತ ಸಂಗಿತಗಾರ ಚಂದನ್ ಶೆಟ್ಟಿ ಹಾಗೂ 2ನೇ ದಿನ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ರಮಾಕಾಂತ್ ಆರ್ಯನ್, ಭಾವನ ಬೆಳಗೆರೆ, ವಿಕ್ರಾಂತ್ ಗೌಡ ಎಚ್.ಎಂ ಫೌಂಡೇಶನ್ ಸಂಸ್ಥಾಪಕ ಮುತ್ತುರಾಜ್ ಆಗಮಿಸಲಿದ್ದಾರೆ ಎಂದು ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.