ಆಷಾಢ ಶುಕ್ರವಾರದ ಹಿನ್ನೆಲೆ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಸಹೋದರ ದಿನಕರ್ ತೂಗುದೀಪ್,ದರ್ಶನ್ ಅಕ್ಕನ ಮಗ ಚಂದನ್ ಮತ್ತು ನಟ ಚಿಕ್ಕಣ್ಣ ಭೇಟಿ ನೀಡಿದ್ದಾರೆ.
ಆಷಾಢ ಶುಕ್ರವಾರದ ಹಿನ್ನೆಲೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯಲು ಬೆಟ್ಟಕ್ಕೆ ಹಲವಾರು ಸೆಲಿಬ್ರೆಟಿಗಳು ಭೇಟಿಯನ್ನ ನೀಡಿ ತಾಯಿ ದರ್ಶನವನ್ನ ಪಡೆಯುತ್ತಾರೆ. ಇಂದು ಡಿ ಬಾಸ್ ದರ್ಶನ್ ಸಹೋದರ ದಿನಕರ್, ಸಹೋದರಿಯ ಮಗ ಚಂದನ್ ಜೊತೆಗೂಡಿ ನಟ ಚಿಕ್ಕಣ್ಣ ಕೂಡ ಚಾಮುಂಡಿ ಬೆಟ್ಟಕ್ಕೆ ತಾಯಿಯ ದರ್ಶನಕ್ಕಾಗಿ ಆಗಮಿಸಿದ್ದಾರೆ.
ಪ್ರತಿ ವರ್ಷ ಆಷಾಢ ಮಾಸದಲ್ಲಿ ಡಿ ಬಾಸ್ ದರ್ಶನ್ ಶಕ್ತಿ ಪೀಠ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆಯನ್ನ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇದೀಗ ಇವರ ಸಹೋದರ ದಿನಕರ್ ತೂಗುದೀಪ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ದಿನಕರ್ ತೂಗುದೀಪ್ ಅವರು ಇಂದು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಬೆಟ್ಟಕ್ಕೆ ಆಗಮಿಸಿದ್ರೆ, ಅತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೊಲ್ಲೂರು ಮುಕಾಂಬಿಕೆಯ ಮೊರೆ ಹೋಗಿದಾರೆ. ಕೊಲ್ಲೂರಿನಲ್ಲಿ ಚಂಡಿಕಾಯಾಗವನ್ನ ಕೈಗೊಂಡಿದ್ದಾರೆ.
Leave a comment