ಪ್ರತಿನಿಧಿ ವರದಿ ಮೈಸೂರು
ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದ್ದು, ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಎಂಎಲ್ಸಿ ಸೂರಜ್ ರೇವಣ್ಣ ಹೇಳಿದರು.
ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಲುಕುವಂತೆ ಮಾಡಿದರು. ಆದರೆ ಸತ್ಯವನ್ನು ತುಂಬಾ ದಿನಗಳ ಕಾಲ ಮುಚ್ಚಿಡಲು ಸಾದ್ಯವಿಲ್ಲ. ಹೀಗಾಗಿ ಇನ್ನು 15 ದಿನ ಕಾದು ನೋಡಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.
ನಾಡ ಅಧಿದೇವತೆ ಚಾಮುಂಡಿ ತಾಯಿ ದರ್ಶನ ಪಡೆದಿದ್ದೇನೆ. ಪ್ರತಿ ವರ್ಷ ತಂದೆಯವರ ಜೊತೆ ಬರುತ್ತಿದ್ದೇ, ಈ ಬಾರಿ ಬರಲು ಸ್ವಲ್ಪ ತಡವಾಯಿತು. ನಾಡ ಅಧಿದೇವತೆ ನಮ್ಮ ರಕ್ಷಣೆಗೆ ಇದ್ದಾಳೆ ಎಂದು ಹೇಳಿದರು.
===========
ಸೂರಜ್ ರೇವಣ್ಣ ಫೋಟೋ ಬಳಸಿ