ಕಡ್ಡಾಯ
ಪ್ರತಿನಿಧಿ ವರದಿ ಮೈಸೂರು
ವನ್ಯಜೀವಿಗಳ ಸಂರಕ್ಷಣೆ ಕುರಿತು ಸಂದೇಶ ನೀಡುವ ಹಾಗೂ ಅರಿವು ಮೂಡಿಸುವ ಉದ್ದೇಶದೊಂದಿಗೆ ನಿರ್ಮಿಸಲಾಗಿರುವ ʻಟೈಮ್ʼ ಕಿರುಚಿತ್ರದ ಪ್ರದರ್ಶನ ಜು.29ರಂದು ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ವಿನಯ್ ತಿಳಿಸಿದರು.
ವೈಲ್ಡ್ ವಂಡರ್ಸ್ ಮೀಡಿಯಾ ವತಿಯಿಂದ ಟೈಮ್ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ತಮ್ಮ ಕಿರುಚಿತ್ರಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವನ್ಯಜೀವಿಗಳ ಮಾಂಸ ಕಾಮೋತ್ತೇಜಕ ವಸ್ತು ಎಂಬ ವ್ಯಾಮೋಹಕ್ಕೆ ಸಿಲುಕುವ ಮನುಷ್ಯ ಸೃಷ್ಟಿಯ ಅಪೂರ್ವ ಜೀವಿಗಳ ನಾಶಕ್ಕೆ ಹೇಗೆ ಕಾರಣನಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು, ಮೂಢನಂಬಿಕೆ ಬಗ್ಗೆಯೂ ಚಿತ್ರದಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಶನಿವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಮಕೃಷ್ಣನಗರದ ನೃಪತುಂಗ ಶಾಲೆ ಆವರಣದಲ್ಲಿರುವ ರಮಾಗೋವಿಂದ ರಂಗ ಮಂದಿರದಲ್ಲಿ ಜು.29ರಂದು ಸಂಜೆ 6.30ಕ್ಕೆ ಕಿರುಚಿತ್ರದ ಪ್ರದರ್ಶನ ನಡೆಯಲಿದೆ. ಇದರ ವೀಕ್ಷಣೆಗೆ ಉಚಿತ ಪ್ರವೇಶ ನೀಡಲಾಗಿದ್ದು, ಚಿತ್ರ ಪ್ರದರ್ಶನದ ನಂತರ ಚಿತ್ರ ತಂಡದ ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ ಇರಲಿದ್ದು, ಈ ವೇಳೆ ನಟ ರಾಘವೇಂದ್ರ ಬೂದನೂರ್, ವನ್ಯಜೀವಿ ತಜ್ಞ ಸೋಮಶೇಖರ್, ರಂಗವಲ್ಲಿ ಸಂಸ್ಥೆಯ ಕಾರ್ಯದರ್ಶಿ ಚಿತ್ರನಟ ರಾಜೇಶ್, ರವಿಪ್ರಸಾದ್, ಆರ್ಕೇಸ್ಟ್ರಾ ಸಿನಿಮಾ ಖ್ಯಾತಿಯ ಮಹೇಶ್ಕುಮಾರ್ ಹಾಜರಿರುತ್ತಾರೆ ಎಂದರು. ಗೋಷ್ಠಿಯಲ್ಲಿ ಪ್ರಯಾಗ್, ಬಿ.ಆರ್. ರಾಜೇಶ್, ಮಧು ಸುಗತ, ವಿಜಯ್ ಕುಮಾರ್, ರಾಘವೇಂದ್ರ ಬೂದನೂರ್ ಇತರರು ಇದ್ದರು.
====================