ಪ್ರತಿನಿಧಿ ವರದಿ ಆಲೂರು
ಎರಡು ವರ್ಷಗಳ ನಂತರ ತುಂಬಿದ ವಾಟೆಹೊಳೆ ಜಲಾಶಯಕ್ಕೆ ಶಾಸಕ ಸಿಮೆಂಟ್ ಮಂಜು ಬಾಗಿನ ಸಮರ್ಪಿಸಿದರು.
ಬಾಗಿನ ಅರ್ಪಿಸಿ ಮಾತನಾಡಿದ ಶಾಸಕರು, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.
ವಾಟೆಹೊಳೆ ಜಲಾಶಯ ಇಲಾಖೆ ಸಹಾಯಕ ನಿರ್ದೇಶಕ ಧರ್ಮರಾಜ ಮಾತನಾಡಿ, ಜಲಾಶಯ ಭರ್ತಿಯಾಗಿದ್ದು ಮೂರು ಗೇಟುಗಳಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ನಾಲೆಗಳಲ್ಲಿ ಅಲ್ಲಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯದೆ ಕೆಲ ಸ್ಥಳಗಳಲ್ಲಿ ನಾಲೆ ಒಡೆದು ನೀರು ಪೋಲಾಗುತ್ತಿರುವುದನ್ನು ಈಗಾಗಲೆ ಶಾಸಕರ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಅನುದಾನ ದೊರಕಿದರೆ ತಾಲೂಕಿನ ರೈತರಿಗೆ ಬೇಸಿಗೆ ಕಾಲದಲ್ಲೂ ನೀರು ಒದಗಿಸಬಹುದು ಎಂದು ಹೇಳಿದರು.
ಸ್ಥಳೀಯ, ರಾಜಕೀಯ ಮುಖಂಡರು, ಜೂನಿಯರ್ ಇಂಜಿನಿಯರ್ ಸಂದೀಪ್ ಉಪಸ್ಥಿತರಿದ್ದರು.
—————————–
ಕೋಟ್
ತಾಲೂಕಿನಲ್ಲಿ ಹೇಮಾವತಿ ಮತ್ತು ಯಗಚಿ ನದಿ ಹರಿಯುತ್ತಿರುವುದು ಹೊರ ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತಿದೆ. ನಮ್ಮ ಭಾಗದಲ್ಲಿ ಮಳೆಯಾದರೆ ಅಕ್ಕ-ಪಕ್ಕದ ತಾಲೂಕುಗಳ ರೈತರಿಗೆ ಬಹಳ ಉಪಯೋಗ ಹಾಗೂ ಸಂತೋಷವಾಗುತ್ತದೆ. ರೈತರು ಮತ್ತು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಸಿಮೆಂಟ್ ಮಂಜು, ಶಾಸಕ.