ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನ ಪಡೆಯುತ್ತಿದೆ. ಒಬ್ಬರ ಮೇಲೊಬ್ಬರು ಬೆರಳು ಮಾಡಿ ತೋರುತ್ತಿದ್ದಾರೆ ವಿಪಕ್ಷ ನಾಯಕರುಗಳು.
ಇಂದು ಮುಡಾ ಹಗರಣದ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಎಂಎಲ್ಸಿ ಹೆಚ್ ವಿಶ್ವನಾಥ್, ನಾಗೇಂದ್ರ ರೀತಿ ಭೈರತಿ ಸುರೇಶ್ನನ್ನು ನೀವು ಜೈಲಿಗೆ ಕಳುಹಿಸಿ ಎಂದು ಸಿಎಮ್ ಸಿದ್ಧರಾಮಯ್ಯಗೆ ಒತ್ತಾಯಿಸಿದ್ದಾರೆ.
ಮುಡಾ ಹಗರಣಕ್ಕೆ ಮೂಲ ಕಾರಣ ಸಚಿವ ಭೈರತಿ ಸುರೇಶ್ ಆದರೆ ನೀವು ಮುಡಾ ಆಯುಕ್ತರಾದ ನಟೇಶ್ ಮತ್ತು ದಿನೇಶಕುಮಾರರನ್ನು ಜೈಲಿಗೆ ಕಳುಹಿಸಿದ ರೀತಿ ಭೈರತಿ ಸುರೇಶ್ ನ್ನು ಜೈಲಿಗೆ ಯಾಕೆ ಕಳುಹಿಸಿಲ್ಲ,ನಿಮ್ಮ ಸಮುದಾಯದವನು ಅಂತಾನಾ ಯಾವ ನ್ಯಾಯ ಇದು ಸಿದ್ದರಾಮಯ್ಯನವರೇ ನಾಯಕ ಸಮಾಜಕ್ಕೆ ಅವಮಾನ ಆದರೆ ಓಕೆ ನಿಮ್ಮ ಸಮಾಜಕ್ಕೆ ಅವಮಾನ ಆಗಬಾರದಾ ಎಂದು ಸಿಎಮ್ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
ನಿವೇಶನಗಳನ್ನು ಗೌರವಯುತವಾಗಿ ಸರಂಡರ್ ಮಾಡಿ ತನಿಖೆಯನ್ನ ಸಿಬಿಐಗೆ ವಹಿಸಿ, ಇಲ್ಲವಾದಲ್ಲಿ ಆ ಜಾಗದಲ್ಲಿ ಮಕ್ಕಳಿಗೆ ಶಾಲೆಯನ್ನ ಕಟ್ಟಿಸಿ ಎಂದಿದ್ದಾರೆ. ನಿಮ್ಮ ಯೋಗ್ಯತೆಗೆ ಎರಡು ಬಾರಿ ಸಿಎಂ ಆಗಿ ಒಬ್ಬರಿಗೆ ನಿವೇಶನ ಕೊಡಲು ಆಗಲಿಲ್ಲ. 40 ವರ್ಷ ಗೌರವಯುತವಾಗಿ ರಾಜಕಾರಣ ಮಾಡಿದ್ದ ನೀವು ಕೊನೆಯಲ್ಲಿ ಮೈಸೂರು ಗೌರವವನ್ನು ಕಳೆಯಬೇಕು ಅಂತಿದ್ದೀರಾ, ನಿಮ್ಮ ಮೇಲೆ ಯಾರಿಗೂ ಹೊಟ್ಟೆ ಕಿಚ್ಚು ಇಲ್ಲ ಗೌರವಯುತವಾಗಿ ಮರ್ಯಾದೆಯಿಂದ ಎಲ್ಲವನ್ನೂ ಸರಂಡರ್ ಮಾಡಿ. ನಾಯಿ ನರಿಗಳೆಲ್ಲಾ ಮುಖ್ಯಮಂತ್ರಿ ಕಚೇರಿ ಸೇರಿಕೊಂಡುಬಿಟ್ಟಿವೆ ಎಂದು ಮೈಸೂರಿನಲ್ಲಿ ಇಂದು ಹೆಚ್ ವಿಶ್ವನಾಥ್ ಸಿಎಮ್ ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದಾರೆ.
Leave a comment