ಮಾನವೀಯತೆ ಮೆರೆದ ಸಿರಾಜ್
ಪ್ರತಿನಿಧಿ ವರದಿ ನಾಪೋಕ್ಲು
ನಗರದ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಚೆರಿಯಪರಂಬು ಗ್ರಾಮದಲ್ಲಿ ಕಾವೇರಿ ನದಿ ಮೈದುಂಬಿ ಹರಿದು ಜನರು ಪ್ರವಾಹದ ಸಂಕಷ್ಟವನ್ನು ಎದುರಿಸುತ್ತಿದ್ದರೆ.
ಈ ಸಂದರ್ಭದಲ್ಲಿ ಗ್ರಾಮದ ನಿವಾಸಿ ಪರವಂಡ ಸಿರಾಜ್ ಎಂಬುವವರು ಪ್ರವಾಹದಲ್ಲಿ ಸಿಲುಕುತ್ತಿದ್ದ ನಾಯಿ ಮರಿಗೆ ಜೀವ ರಕ್ಷಣೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮದ ನಿವಾಸಿ ಅಲ್ಲಿನ ಜಮಾಅತ್ ಉಪಾಧ್ಯಕ್ಷ ಹಾಗೂ ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಅವರೇ ಪುಟ್ಟ ನಾಯಿ ಮರಿಗೆ ಪ್ರವಾಹದ ನೀರಿನಿಂದ ಜೀವರಕ್ಷಣೆ ನೀಡಿದ ಹೀರೊ.
ಗ್ರಾಮದಲ್ಲಿರುವ ತನ್ನ ಮನೆಯಸುತ್ತಲೂ ಪ್ರವಾಹ ಬಂದು ಆವರಿಸಿದ ಪರಿಣಾಮ ದಿಕ್ಕು ದೋಚದೆ ಮನೆಯ ವಸ್ತುಗಳನ್ನು ಸ್ಥಳಾಂತರಿಸುವ ಬರದಲ್ಲಿಯಿರುವಾಗ ನಾಯಿ ಮರಿಯ ಕೂಗು ಸಿರಾಜ್ ಕಿವಿಗೆ ಕೇಳಿಬಂದಿದೆ. ತಕ್ಷಣ ಗೆಳೆಯನೊಂದಿಗೆ ಅಲ್ಲಿಗೆ ತೆರಳಿದ ಸಿರಾಜ್ ಅವರ ಕಣ್ಣಿಗೆ ಕಂಡಿದ್ದು ನಾಯಿ ಮರಿ. ತಾಯಿ ಇಲ್ಲದೆ ಒಬ್ಬಂಟಿಯಾಗಿ ತನ್ನ ಸನಿಹ ವಿರುವ ಪ್ರವಾಹದ ನೀರಿನಲ್ಲಿ ಮುಳುಗುವ ಹಂತಕ್ಕೆ ತಲುಪಿ ಜೀವರಕ್ಷಣೆಗಾಗಿ ಕೂಗುತ್ತಿರುವ ದೃಶ್ಯ ಕಂಡ, ತಕ್ಷಣ ಹಿಂದೆ ಮುಂದೆ ನೋಡದೆ ಬಾಕ್ಸ್ ತಂದು ನಾಯಿ ಮರಿಯನ್ನು ಅದರಲ್ಲಿರಿಸಿ ಮನೆಗೆ ಕರೆತಂದು ಹಾರೈಕೆ ಮಾಡಿದರು. ಇದರಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.