ಪ್ರತಿನಿಧಿ ವರದಿ ಬೇಲೂರು
ತಾಲೂಕಿನ ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಪಂ ವ್ಯಾಪ್ತಿ ಕಿತ್ತಾವರ, ಹೆಗ್ಗಡಿಹಳ್ಳಿ ಸುತ್ತ ಮುತ್ತ ಸುಮಾರು ೧೪ ಕಾಡಾನೆಗಳ ಹಿಂಡು ಭಾನುವಾರ ಮಧ್ಯರಾತ್ರಿ ತೋಟಗಳಿಗೆ ದಾಂಗುಡಿಯಿಟ್ಟ ಪರಿಣಾಮ ಸಾವಿರಾರು ರೂ. ಮೌಲ್ಯದ ಬೆಳೆ ನಷ್ಟವಾದ ಘಟನೆ ಸಂಭವಿಸಿದೆ.
ಕಿತ್ತಾವರ ಗ್ರಾಮದ ಉದ್ದಯ್ಯ, ಶೇಖರ್, ಸಣ್ಣಯ್ಯ ಹಾಗೂ ಕುಮಾರ್ ಎಂಬುವರ ತೋಟಗಳಲ್ಲಿ ಕಂಡುಬಂದ ಕಾಡಾನೆಗಳ ದಾಳಿಗೆ ಕಾಫಿ, ಸಿಲ್ವರ್, ಬಾಳೆ, ಅಡಕೆ ಬೆಳೆಗಳು ನೆಲಕಚ್ಚಿವೆ.
ಈ ವೇಳೆ ತೋಟದ ಮಾಲೀಕರಾದ ಯಮುನಾಕುಮಾರ್ ಮಾತನಾಡಿ, ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಗಿಡಗಳನ್ನು ಬೆಳೆಸಿದ್ದೇವೆ. ನಾವು ಜೀವನ ಮಾಡಲು ಇವುಗಳ ನಮಗೆ ಆಧಾರ. ಗುಂಪು ಗುಂಪಾಗಿ ಕಾಡಾನೆಗಳು ಬಂದು ಹೀಗೆ ಬೆಳೆ ನಾಶ ಮಾಡಿದರೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಬ್ಯಾಂಕಿನಲ್ಲಿ ಸಾಲ ಸೋಲ ಮಾಡಿ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದೇವೆ. ಫಸಲು ಬಂದರಷ್ಟೆ. ಸಾಲ ಮರುಪಾವತಿ ಮಾಡಲು ಸಾಧ್ಯ ಪರಿಸ್ಥಿತಿ ಹೀಗಿರುವಾಗ ಆನೆಗಳಿಂದ ಉಂಟಾಗುವ ನಷ್ಟಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂದರು. ಶೇಖರ್, ಕುಮಾರ್, ಲೀಲಾ ಇದ್ದರು.
ಪೋಟೋ: ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಪಂ ವ್ಯಾಪ್ತಿಯ ಕಿತ್ತಾವರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಬೆಳೆ ನಾಶವಾಗಿದೆ.