ಪ್ರತಿನಿಧಿ ವರದಿ ಆಲೂರು
2017ರಲ್ಲಿ ಜಾರಿಯಾದಂತ ವೃಂದ ಮತ್ತು ನೇಮಕಾತಿ ನಿಯಮಗಳನ್ನು, 2016ರ ಮುನ್ನ ನೇಮಕಾತಿಯಾದ ಎಲ್ಲ ಪ್ರಾಥಮಿಕ ಶಿಕ್ಷಕರಿಗೆ 2016ಕ್ಕೆ ಪೂರ್ವದಂತೆ ಪ್ರೌಢಶಾಲೆಗಳಿಗೆ ಅರ್ಹತೆಯ ಆಧಾರದ ಮೇಲೆ ಬಡ್ತಿಯನ್ನು ನೀಡಬೇಕು ಹಾಗೂ ಮುಖ್ಯ ಗುರುಗಳ ಮತ್ತು ಹಿರಿಯ ಮುಖ್ಯ ಗುರುಗಳ ಹುದ್ದೆಗಳಿಗೆ ಬಡ್ತಿಯನ್ನು ನೀಡಬೇಕೆಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಮಾಧ್ಯಮದೊಂದಿಗೆ ಮಾತನಾಡಿ, 2017 ರಲ್ಲಿ ಜಾರಿಗೆ ಆದಂತಹ ಸಿ ಅಂಡ್ ಆರ್ ಎಂಬ ಮರಣ ಶಾಸನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅತ್ಯಂತ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಇಂತಹ ಒಂದು ಶಾಸನವೂ 2017ರಲ್ಲಿ ಜಾರಿಯಾದರೂ ಸಹ ಮಕ್ಕಳ ಭವಿಷ್ಯಕ್ಕೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಇದುವರೆಗೂ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇವೆ. ಆದರೂ ಸಹ ಸರ್ಕಾರ ಈ ಬಗ್ಗೆ ಗಮನ ಹರಿಸದೆ 2017 ರಲ್ಲಿ ಜಾರಿಗೆ ಬಂದಂತಹ ಸಿ ಅಂಡ್ ಆರ್ ನಿಯಮವನ್ನು ತಕ್ಷಣವೇ ಹಿಂಪಡೆಯಬೇಕು 2017ರ ಪೂರ್ವದಲ್ಲಿ ನೇಮಕವಾದವರಿಗೆ ಈ ಹೊಸ ನಿಯಮವು ಅನ್ವಯಿಸುವುದಿಲ್ಲ ಎಂಬ ಕಾರ್ಯ ಆದೇಶವನ್ನು ಹೊರಡಿಸಬೇಕು ಎಂಬ ಉದ್ದೇಶದಿಂದ ಆ.12ರಂದು ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳನ್ನು ಬಂದ್ ಮಾಡುವ ಮೂಲಕ ಒಂದು ದಿನದ ಸಾಂಕೇತಿಕ ಧರಣಿಯನ್ನು ಬೃಹತ್ ಮಟ್ಟದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಗೌರವಾಧ್ಯಕ್ಷ ಚೆನ್ನಿಗ ರಾಮಯ್ಯ, ಅಧ್ಯಕ್ಷ ಅಮೃತೇಶ್, ಕಾರ್ಯದರ್ಶಿ ಶ್ರೀನಿವಾಸ್, ಮಹಿಳಾ ಶಿಕ್ಷಕಿಯರ ಅಧ್ಯಕ್ಷೆ ಚಂದ್ರಮ್ಮ, ಸಿ ಆರ್ ಪಿ ಸಂಘದ ಅಧ್ಯಕ್ಷರುಗಳಾದ ವೇಣುಗೋಪಾಲ್, ವೈ.ಆರ್.ರವಿ, ಸಂಘಟನಾ ಕಾರ್ಯದರ್ಶಿ ಬೇಬಿ ಹಾಜಿರ, ಜಿಲ್ಲಾ ಸಹಕಾರ್ಯದರ್ಶಿ ವರದರಾಜು, ಎನ್ಜಿಒ ನಿರ್ದೇಶಕರುಗಳಾದ ಪರಮೇಶ್, ಸೋಮೇಶ್, ಶ್ರೀಕಾಂತ, ಭೂಪಾಲಯ್ಯ, ಚಂದ್ರಕುಮಾರ್, ವೆಂಕಟರಂಗಯ್ಯ ಇತರರು ಇದ್ದರು.