ನಂಜನಗೂಡು ಶ್ರೀಕಂಠೇಶ್ವರ ಮತ್ತೊಮ್ಮೆ ಕೋಟಿಯ ಒಡೆಯನಾಗಿದ್ದಾನೆ. ನಿನ್ನೆ ದೇವಾಲಯದ ಹುಂಡಿ ಎಣಿಕೆ ಕಾರ್ಯವನ್ನ ಮಾಡಲಾಗಿದ್ದು. ದೇವಾಲಯದ ಹುಂಡಿಯಲ್ಲಿ 1.12 ಕೋಟಿ ಹಣ ಮತ್ತು51 ಗ್ರಾಂ ಚಿನ್ನ ಹಾಗೂ 1 ಕೆ ಜಿ 800 ಗ್ರಾಂ ಬೆಳ್ಳಿ ದೊರಕಿದೆ. ಮಾಸಿಕ ಹುಂಡಿ ಎಣಿಕೆ ಕಾರ್ಯದಲ್ಲಿ ದೇಗುಲದ 35 ಹುಂಡಿಗಳನ್ನು ತೆರೆದು ಎಣಿಕೆಯನ್ನ ಮಾಡಲಾಗಿದೆ. ಎಣಿಕೆಯಲ್ಲಿ 1,12,92,056 ರೂ., 51.380 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 46 ವಿದೇಶಿ ಕರೆನ್ಸಿಗಳನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.
ದಕ್ಷಿಣಕಾಶಿ ಎಂತಲೇ ಪ್ರಸಿದ್ಧವಾಗಿರುವ ನಂಜನಗೂಡಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಶ್ರೀಕಂಠೇಶ್ವರಸ್ವಾಮಿ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಹರಕೆಯನ್ನ ಕಟ್ಟಿ ಗುಣಮುಖರಾದ ನಂತರ ದೇವರಿಗೆ ಚಿನ್ನ, ಬೆಳ್ಳಿ ಹರಕೆಯನ್ನ ಸಲ್ಲಿಸುತ್ತಾರೆ. ದೇವಾಲಯದ ದಾಸೋಹ ಭವನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಇಒ ಜಗದೀಶ್ ಕುಮಾರ್, ಎಇಒ ಸತೀಶ್, ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಹುಂಡಿಗಳ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.