ಪ್ರತಿನಿಧಿ ವರದಿ ಆಲೂರು
ಬೀದಿಗೆಸೆದ ಕಸ ಸರಿಯಾಗಿ ಕೊಳೆಯದೆ ವಿಷಪೂರಿತ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ನೆಲ, ಜಲ, ಗಾಳಿಯನ್ನು ಮಾಲಿನ್ಯ ಮಾಡುತ್ತದೆ. ಕಸವನ್ನು ವಿಂಗಡಿಸಿ ಶೇಖರಿಸಿ ಕಸದ ವಾಹನಕ್ಕೆ ಕೊಡಬೇಕು ಎಂದು ಘನ ತ್ಯಾಜ್ಯ ನಿರ್ವಹಣಾ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲೂರು ವತಿಯಿಂದ ಏರ್ಪಡಿಸಲಾಗಿದ್ದ ಸಿಡ್ಡಿ ಪ್ರಯಾಸ್ ಸ್ವ-ಉದ್ಯೋಗದ ಬಗ್ಗೆ ಮಾಹಿತಿ ಹಾಗೂ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರಗೋಡು ಕಾರ್ಯಕ್ಷೇತ್ರದ ಶ್ರೀ ಕೆಂಚಾಂಬದೇವಿ ಜ್ಞಾನವಿಕಾಸ ಕೇಂದ್ರದಲ್ಲಿ ಮಹಿಳಾ ಜ್ಞಾನವಿಕಾಸ ಸೃಜನಶೀಲಾ ಕಾರ್ಯಕ್ರಮದಡಿಯಲ್ಲಿ ಹಸಿ ಕಸ-ಒಣ ಕಸ ಕಂಪೋಸ್ಟಿಂಗ್ ತಯಾರಿ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಸ ರಕ್ಕಸವನ್ನು ತಡೆಯೋಣ ನನ್ನ ಕಸ ನನ್ನದೇ ಹೊಣೆ ಎಂದು ಎಲ್ಲರೂ ತಿಳಿಯಬೇಕು. ಪ್ರತಿ ನಿತ್ಯ ಆಹಾರ, ನೀರು ಸುತ್ತ ಮುತ್ತಲಿನ ಪರಿಸರ ಚೆನ್ನಾಗಿರಬೇಕಾದರೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ರವರು ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕಂಪೋಸ್ಟ್ಟಿಂಗ್ ಮನೆಯಲ್ಲಿ ತಯಾರಿ ಮಾಡುವ ಬಕೆಟ್ಗಳನ್ನು ವಿತರಣೆ ಮಾಡಿದರು.
ಯೋಜನಾಧಿಕಾರಿ ರತ್ನಾಕರ್ ಕೊಠಾರಿ, ರಾಜ್ ಒಕ್ಕೂಟದ ಅಧ್ಯಕ್ಷ ಶೇಖರ್, ಗ್ರಾಪಂ ಉಪಾಧ್ಯಕ್ಷ ಗುರುದೇವ್, ಜಿಲ್ಲಾ ನಿರ್ದೇಶಕ ಮಮತಾ ಹರೀಶ್ರಾವ್, ಅನಿತಾ, ಗ್ರಾಪಂ ಸದಸ್ಯೆ ಯಶೋದ, ಮಹಿಳಾ ಸಮಾಜ ಅಧ್ಯಕ್ಷೆ ಪಾರ್ವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸರಸ್ವತಿ, ಸೇವಾಪ್ರತಿನಿಧಿ ಸವಿತಾ ಮತ್ತು ಜ್ಞಾನವಿಕಾಸ ಕೇಂದ್ರ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.