ಪ್ರತಿನಿಧಿ ವರದಿ ಅರಕಲಗೂಡು
ತಾಲೂಕಿನ ಕೊಳ್ಳಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಕೋಡನಹಳ್ಳಿ ಬೊಮ್ಮೇಗೌಡ ಮತ್ತೊಮ್ಮೆ ಅವಿರೋಧ ಆಯ್ಕೆಯಾಗಿದ್ದಾರೆ. ಹಾಗೆಯೇ ಉಪಾಧ್ಯಕ್ಷರಾಗಿ ಶೇಖರ್ ಆಯ್ಕೆಯಾಗಿದ್ದಾರೆ. ಬೊಮ್ಮೇಗೌಡ ಅವರು ಈ ಹಿಂದೆಯೂ ಹಲವು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಂಘದ ನಿರ್ದೇಶಕರ ಸ್ಥಾನಕ್ಕೆ ಕಳೆದ ಜು.13 ರಂದು ಚುನಾವಣೆ ನಡೆದಿತ್ತು. ಅಂದು ಕ್ರಮವಾಗಿ ಮೊದಲ ನಾಲ್ವರು ಅವಿರೋಧ ಆಯ್ಕೆಯಾಗಿದ್ದರು. ಅಂತಿಮವಾಗಿ ಬೊಮ್ಮೇಗೌಡ ಮತ್ತವರ ತಂಡದ ಸದಸ್ಯರಾದ ಶಿವಮ್ಮ ಬಸಪ್ಪ, ಭಾಗ್ಯ ನಂಜುಂಡ, ಚಂದ್ರ, ಚನ್ನೇಗೌಡ, ಮರಿದ್ಯಾವೇಗೌಡ, ಶೇಖರ್, ಕೆ.ಕೆ.ಸಿದ್ದಲಿಂಗಪ್ಪ, ಮರಿಯಯ್ಯ, ಮೊಹಮ್ಮದ್ ವಾಜಿದ್ ಮತ್ತು ಚನ್ನವೀರಪ್ಪ ನಿರ್ದೇಶಕರಾಗಿ ಚುನಾಯಿತರಾಗಿದ್ದರು.
ಜು.28 ರಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಈ ಇಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅಂತಿಮವಾಗಿ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಪ್ರಕಟಿಸಿದರು.