ಪ್ರತಿನಿಧಿ ವರದಿ ಅರಸೀಕೆರೆ
ತಾಲೂಕಿನ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮನವರ ನೂತನ ದೇವಾಲಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಆ.9 ರ ಶುಕ್ರವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್. ನಟರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮನವರ ಸೇವಾ ಟ್ರಸ್ಟ್ ವತಿಯಿಂದ ಆ.9 ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಮಾಡಾಳಿನ ಶ್ರೀ ಚನ್ನಬಸವೇಶ್ವರ ಚಿತ್ರಮಂದಿರದ ಪಕ್ಕದ, ಶ್ರೀ ಗುರು ಶೀವಬಸವ ಕುಮಾರಾಶ್ರಮದ ರಸ್ತೆಯಲ್ಲಿ ಶ್ರೀ ಮೂಲಸ್ಥಾನ ಶ್ರೀ ಸ್ವರ್ಣಗೌರಮ್ಮನವರ ನೂತನ ದೇವಾಲಯ ಶಂಕುಸ್ಥಾಪನೆಯನ್ನು ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳರ ಸಾನ್ನಿಧ್ಯದಲ್ಲಿ ನೆರವೇರಲಿದೆ.
ಈ ಕಾರ್ಯಕ್ರಮವು ಮಾಡಾಳು ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಸಮ್ಮುಖದಲ್ಲಿ ಹಾಗೂ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ತಿಪಟೂರು ಷಡಾಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಜರುಗಲಿದೆ ಎಂದು ತಿಳಿಸಿದ್ದಾರೆ.
ಶಿವಲಿಂಗಪ್ಪ, ಸೋಮಶೇಖರ್, ರಾಂಪುರ ಶೇಖರಪ್ಪ, ಮರುಳಸಿದ್ದ ಕುಮಾರ, ನಂದೀಶ್ಕುಮಾರ್, ಚಂದ್ರಶೇಖರಸ್ವಾಮಿ, ಎಂ.ಪಿ. ಗುರುಸಿದ್ದಪ್ಪ, ಬಸವರಾಜು, ಕಲ್ಲತ್ತೆಗೌಡ, ಶಿವಲಿಂಗಪ್ಪ, ಚಂದ್ರಪ್ಪ ಉಪಸ್ಥಿತರಿದ್ದರು.