ಪ್ರತಿನಿಧಿ ವರದಿ ಮೂಡಿಗೆರೆ
ತಾಲೂಕಿನ ಗದ್ಗಲ್ ಗ್ರಾಮದ ಬಳಿ ಕಬ್ಬಿಣದ ಏಣಿಯನ್ನು ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಸನ್ನ ಸಾಲ್ಡನ್ [48] ಮೃತ ವ್ಯಕ್ತಿ. ಮಲೆನಾಡಿನಲ್ಲಿ ಭಾರಿ ಗಾಳಿ, ಮಳೆಗೆ ವಿದ್ಯುತ್ ತಂತಿಗಳು ಅತ್ಯಂತ ಕೆಳಭಾಗದಲ್ಲಿ ಜೋತು ಬಿದ್ದಿದ್ದು, ಇವರು ಮನೆಯಿಂದ ಕಾಫಿ ತೋಟಕ್ಕೆ ಕಬ್ಬಿಣದ ಏಣಿಯನ್ನು ತೆಗೆದುಕೊಂಡು ಹೋಗುವಾಗ ವಿದ್ಯುತ್ ತಂತಿಗೆ ತಾಗಿದೆ. ಇದರಿಂದ ಪ್ರಸನ್ನ ಸಾಲ್ಡನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.