ಪ್ರತಿನಿಧಿ ವರದಿ ಸಕಲೇಶಪುರ
ಕಾರಿನಲ್ಲಿ 80ಕೆ.ಜಿ. ಗೋಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಬಿಲಾಲ್ ಮಸೀದಿ ರಸ್ತೆಯ ಸಲ್ಮಾನ್ ಖುರೇಷಿ ಮತ್ತು ಹಾಸನದ ಸಲೀಂ ನಗರದ ಇರ್ಫಾನ್ಖಾನ್ ಬಂಧಿತ ಆರೋಪಿಗಲಾಗಿದ್ದು, ಗುರುವಾರ ಸಂಜೆ 5.45ರ ಸಮಯದಲ್ಲಿ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಗದೀಶ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮಳಲಿ ಕೊಲ್ಲಹಳ್ಳಿ ಗ್ರಾಮದ ಬಳಿಯ ಸಕಲೇಶಪುರ-ಹಾಲೆ ಬೇಲೂರು ಬೈಪಾಸ್ ರಸ್ತೆಯಲ್ಲಿ ಕಾದು ನಿಂತು ಅಕ್ರಮವಾಗಿ ಸಾಗಿಸುತ್ತಿದ್ದ 80ಕೆ.ಜಿ. ಗೋಮಾಂಸ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.