ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂಥೆರೋ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ (ಆಗಸ್ಟ್ 10) ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸ್ಯಾಂಡಲ್ ವುಡ್ ಬೆಡಗಿ ಸೋನಾಲ್ ಆರತಕ್ಷತೆ ಸಮಾರಂಭ ನಡೆದಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವಾರು ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಟಾರ್ ಜೋಡಿಗೆ ಶುಭಾಶಯವನ್ನು ಕೋರಿದರು.
ಬೆಂಗಳೂರಿನ ಕೆಂಗೇರಿ ಸಮೀಪವಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಭಾನುವಾರ ತರುಣ್, ಸೋನಲ್ ಗೆ ಹಿಂದೂ ಸಂಪ್ರದಾಯದಂತೆ ಮಾಂಗಲ್ಯಧಾರಣೆಯನ್ನ ಮಾಡಿದ್ದಾರೆ. ಎರಡೂ ಕಡೆಯ ಕುಟುಂಬದವರ ಜೊತೆ ಸ್ಯಾಂಡಲ್ವುಡ್ ತಾರೆಯರು ಸ್ಟಾರ್ ಜೋಡಿಯ ಮದುವೆಗೆ ಸಾಕ್ಷಿಯಾಗಿದ್ದಾರೆ. ಮದುವೆಗೆ ತೆಲುಗಿನ ಹಿರಿಯ ನಟ ಜಗಪತಿ ಬಾಬು ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾದಬ್ರಹ್ಮ ಹಂಸಲೇಖ, ಅನಿರುದ್ಧ್, ರಾಕ್ ಲೈನ್ ವೆಂಕಟೇಶ್, ಮಾಲಾಶ್ರೀ, ಕೆ.ಮಂಜು ಆಗಮಿದ್ದರು. ತರುಣ್ ಸುಧೀರ್ ಉತ್ತರ ಕರ್ನಾಟಕ ಮೂಲದವರಾಗಿದ್ದು, ಸೋನಾಲ್ ಮಾಂಥೆರೋ ಅಪ್ಪಟ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮೂಲತಃ ಮಂಗಳೂರಿನ ಹುಡುಗಿ. ಮೊದಲು ಹಿಂದೂ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ನಡೆದಿದೆ.
ಬೆಳಗ್ಗೆ 10.50 ರಿಂದ 11.35ರ ಒಳಗಿನ ತುಲಾ ಲಗ್ನದಲ್ಲಿ ಈ ಮದುವೆ ನಡೆದಿದೆ. ಮಂಗಳೂರಿನಲ್ಲಿ ಮತ್ತೆ ಸೋನಾಲ್ ಮತ್ತು ತರುಣ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ವಿವಾಹದಲ್ಲಿಎರಡೂ ಕಡೆಯ ಕುಟುಂಬಸ್ಥರು ಹಾಗೂ ಆಪ್ತರು ಈ ಸ್ಟಾರ್ ಜೋಡಿ ಮದುವೆಗೆ ಸಾಕ್ಷಿಯಾಗಿದ್ದು, ಅಭಿಮಾನಿಗಳು ಸ್ಟಾರ್ ಜೋಡಿಗೆ ಶುಭಾಶಯಗಳ ಸುರಿಮಳೆಯನ್ನ ಸುರಿಸಿದ್ದಾರೆ.