ಪ್ರತಿನಿಧಿ ವರದಿ ಕೆ.ಆರ್.ನಗರ
ಸಹೊರ್ ವರ್ದಿ ಮಧಾರಿಯಾದ ಗುರುಗಳು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ (ಮುನಾವರ್ ಪಾಷಾ) ಅವರ ಹುಟ್ಟು ಹಬ್ಬವನ್ನು ಭಾನುವಾರ ಗುರು, ಶ್ರಮಿಕ ಮತ್ತು ಪೌರ ಕಾರ್ಮಿಕ ಸೌಹಾರ್ದ ಸಮಾಗಮ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ವಿವಿಧ ಧರ್ಮಗುರುಗಳ ಸಾನಿಧ್ಯದಲ್ಲಿ ನಡೆದ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸುಮಾರು 350ಕ್ಕೂ ಹೆಚ್ಚು ಶ್ರಮಿಕ ವರ್ಗದವರನ್ನು ಗೌರವಿ ಸಲಾಯಿತ್ತಲ್ಲದೆ ಸಹಪಂಕ್ತಿ ಭೋಜನ ಏರ್ಪಡಿಸಲಾಗಿತ್ತು.
ಸಹೊರ್ ವರ್ದಿ ಮಧಾರಿಯಾದ ಧರ್ಮಗುರು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ (ಮುನಾವರ್ ಪಾಷಾ) ಮಾತನಾಡಿ, ಸಮಾಜದಲ್ಲಿ ಉಳ್ಳವರು ಮತ್ತು ಹೃದಯವಂತರು ಜನ್ಮದಿನ ಆಚರಣೆಯ ನೆಪದಲ್ಲಿ ಅನಗತ್ಯವಾಗಿ ಹಣ ವ್ಯಯ ಮಾಡದೆ ನೊಂದವರು ಮತ್ತು ಕಾಯಕ ಜೀವಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಇತರರಿಗೆ ಮಾದರಿಯಾಬೇಕು ಆ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಬಡವರ್ಗದ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಕೇಂದ್ರ ತೆರೆಯಲಿದ್ದು ತರಬೇತಿ ಪಡೆದಂತಹಾ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲು ತೀರ್ಮಾನಿಸಲಾಗಿದೆ. ಎಂದು ಮಾಹಿತಿ ನೀಡಿದ ಗುರುಗಳು ಪ್ರತಿ ತಿಂಗಳ ಕೊನೆಯ ದಿನ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಔಷಧಿ ಖರೀದಿಸಲು ಹಣ ಇಲ್ಲದಂತಹಾ ಬಡವರನ್ನು ಗುರುತಿಸಿ ಅವರುಗಳಿಗೆ ಒಂದು ತಿಂಗಳಿಗಾಗುವಷ್ಟು ಔಷಧಿ ಮಾತ್ರೆಗಳನ್ನು ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದರು. ನಾವು ಸೇವಾ ಕಾರ್ಯವನ್ನು ಜಾತ್ಯಾತೀತವಾಗಿ ಮತ್ತು ಧರ್ಮಾತೀತವಾಗಿ ಮಾಡುತ್ತಿದ್ದು ಎಲ್ಲರೂ ನನ್ನನ್ನು ನಿಮ್ಮ ಕುಟುಂಬದವನೆಂದು ಪರಿಗಣಿಸಿ ಸಹಕಾರ ನೀಡಬೇಕೆಂದು ಕೋರಿದರು.
ಈ ವೇಳೆ ಹಲವು ಮಂದಿ ಯುವಕರು ಮತ್ತು ಧರ್ಮ ಗುರುಗಳ ಭಕ್ತರು ಆಗಮಿಸಿ ಹುಟ್ಟು ಹಬ್ಬಕ್ಕೆ ಶುಭಾಷಯ ಕೋರಿದರು. ಧರ್ಮ ಗುರುಗಳಾದ ಅಲಾಂ ನವಾಜ್ ಅಹಮ್ಮದ್ ಷಾ ಸಹೋರರ್ದಿ, ಅಸದ್ಬಾವ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಯನ್ಶಿವರಾಜು, ರಾಜ್ಯ ಯುವಘಟಕದ ಅಧ್ಯಕ್ಷ ರಾಜಿಕ್ಖಾನ್, ಉದ್ಯಮಿ ನರಸಿಂಹಮೂರ್ತಿ, ವೈದ್ಯ ಡಾ.ದೇವೇಂದ್ರಪ್ಪ, ಮುಖಂಡ ಮುಜಾಜಿ ಅಹಮ್ಮದ್, ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮಶೆಟ್ಟಿ, ಕಾರ್ಯದರ್ಶಿ ಸೈಯದ್ರಿಜ್ವಾನ್, ಪದಾಧಿಕಾರಿಗಳಾದ ರಾಜಯ್ಯ, ವ್ಯಾನ್ಸುರೇಶ್, ಮಂಜುನಾಥ್, ರಾಮಶೆಟ್ಟಿ, ರವಿಕುಮಾರ್, ಶಿವಶಂಕರ್, ಅರ್ಜುನ್ಕುಮಾರ್, ಸಿರಾಜ್ ಮತ್ತಿತರರು ಹಾಜರಿದ್ದರು.
12 ಕೆ ಆರ್ ಎನ್-1:- ಕೆ.ಆರ್.ನಗರ ಪಟ್ಟಣದ ಶ್ರೀಕೃಷ್ಣ ಮಂದಿರದಲ್ಲಿ ಸಹೊರ್ ವರ್ದಿ ಮಧಾರಿಯಾದ ಗುರುಗಳು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ (ಮುನಾವರ್ ಪಾಷಾ) ಇವರ 33ನೇ ಹುಟ್ಟು ಹಬ್ಬವನ್ನು ಶ್ರಮಿಕವರ್ಗದವರಿಗೆ ಸನ್ಮಾನಿಸುವ ಮೂಲಕ ಆಚರಿಸಲಾಯಿತು.