ದೇಶದಲ್ಲಿ ರಾಜ್ಯ 2ನೇ ಸ್ಥಾನ/ ಹೈನುಗಾರಿಕೆ ಗ್ರಾಮೀಣ ಪ್ರದೇಶ ಆರ್ಥಿಕ ಮೂಲ
ಪ್ರತಿನಿಧಿ ವರದಿ ತಿ.ನರಸೀಪುರ
ಕರ್ನಾಟಕ ರಾಜ್ಯ ಹೇನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಗುಜರಾತ್ ಬಿಟ್ಟರೆ ಎರಡನೇ ಸ್ಥಾನದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದು, ರೈತರು ಉತ್ತಮವಾದ ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ರೈತರಿಗೆ ಮಂಡಳಿಯಿಂದ ಪ್ರತಿ ಲೀಟರ್ ಗೆ35 ರೂಪಾಯಿಗಳನ್ನು ನೀಡಲಾಗುತ್ತಿದ್ದು, ಪಶು ಆಹಾರ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಮಂಡಳಿ ಕೆಲವು ಸಮಯದಲ್ಲಿ ಸಷ್ಟದಲದಲಿದ್ದರೂ ರೈತರ ಹಿತಾಸಕ್ತಿಯನ್ನು ಕಾಪಾಡುತ್ತಿದೆ. ನಂದಿನಿ ಹಾಲು ನಮ್ಮ ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ಹೆಚ್ಚು ಪ್ರಖ್ಯಾತಿಯನ್ನು ಹೊಂದಿವೆ .ಅಲ್ಲದೆ ಹೆಚ್ಚು ದೇಶದಲ್ಲೇ ಹೆಚ್ಚು ಮಾರಾಟವಾಗುವ ಹಾಲು ಎಂದು ಖ್ಯಾತಿ ಹೊಂದಿವೆ ಎಂದರು.
ಗ್ರಾಮೀಣ ಪ್ರದೇಶದ ಆರ್ಥಿಕ ಮೂಲ:
ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚು ಹಸುಗಳನ್ನು ಸಾಕಿ ಹಾಲು ಮಾರಾಟದಿಂದ ಜೇವನ ನಿರ್ವಹಣೆ ಮಾದುತ್ತಿದ್ದು, ಹೈನುಗಾರಿಕೆ ಗ್ರಾಮೀಣ ಜನರ ಆರ್ಥಿಕ ಮೂಲವಾಗಿದೆ. ಗ್ರಾಮಿಣ ಪ್ರದೇಶದ ಬಹುತೇಕ ಮನೆಗಳಲ್ಲಿ ಹಸು ಸಾಕಾಣಕೆಯನ್ನು ನಾವು ಕಾಣಬಹುದು ಎಂದರು.
ನಿರಪರಾಧಿ ಸಿಎಂ: ನಮ್ಮ ತಂತೆಯವರ ಮೇಲೆ ಪ್ರತಿಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು,ಅರೋಪಗಳಲ್ಲಿ ಹುರುಳಿಲ್ಲ . ಪ್ರತಿ ಪಕ್ಷಗಳು ರಾಜ್ಯದಲ್ಲಿ ಆದ ಬರ ಮತ್ತು ಪ್ರವಾಹ ಪರಿಸ್ಥಿತಿಯ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ಮಾಡುವುದರಲ್ಲಿ ಸಕ್ರಿಯವಾಗಿವೆ ಎಂದು ಆರೋಪಿಸಿದರು.
ಮೈಮುಲ್ ಅಧ್ಯಕ್ಷ ಚಲುವರಾಜು ಮಾತನಾಡಿ,ನನ್ನನ್ನು ಮೈಮುಲ್ ನೂತನ ಅಧ್ಯಕ್ಷರರಾಗಿ ಆಯ್ಕೆ ಮಾಡಲು ಸಹಕರಿಸಿದ ಮುಖ್ಯಮಂತ್ರಿ, ಉಸ್ತುವಾರಿಸಚಿವರು , ಸಂಸದರಾದ ಸುನೀಲ್ ಬೋಸ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಯತೀಂದರ್ ಸಿದ್ದರಾಮಯ್ಯ ಅವರಿಗೆ ದಣ್ಯವಾದ ಅರ್ಪಿಸಿದರು.
13.50 ಲಕ್ಷ ವೆಚ್ಚದಲ್ಲಿ ಹಾಲು ಉತ್ಪಾದಕರ ಸಂಘದ ಕಟ್ಟಡವನ್ನು ನಿರ್ಮಾಣ ಮಾಡಿಕೊಂಡಿರುವುದು ತುಂಬಾ ಸಂತಸ. ರಾಜ್ಯದಲ್ಲಿ ದಿನಕ್ಕೆ 9.50ಲಕ್ಷ ಹಾಲು ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಮಾರಾಟವಅಗು ಉಳಿದ ಹಾಲನ್ನು ಪೌಡರ್ ಮಾಡಿ ಮಾರಾಟ ಮಾರಾಟ ,ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರು ರೈತ ಪರವಾಗದ ಮುಖ್ಯಮಂತ್ರಿಯಾಗಇದ್ದಯ, ಅವರು ರೈತರಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಮಾಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ನಂದಿನಿ, ಮೈಮುಲ್ ನಿರ್ದೇಶಕರುಗಳಾದ ಸಿ. ಓಂ ಪ್ರಕಾಶ್, ಕೆ. ಉಮಾಶಂಕರ,ಕೆ. ಜಿ ಮಹೇಶ್, ಬಿ. ಗುರುಸ್ವಾಮಿ ಗುರುಸ್ವಾಮಿ, ಮೈಮುಲ್ ಎಂ.ಡಿ .ಸುರೇಶ ನಾಯಕ,.ಮಾಜಿ ಜಿಪಂ ಸದಸ್ಯರುಗಳಾದ ಕೆ.ಮಹದೇವ, ಸುಧಾಮಹಾದೇವಯ್ಯ, ಕೆಂಪಯ್ಯನಹುಂಡಿ ಮಹದೇವಣ್ಣ, ಉಪಾಧ್ಯಕ್ಷ ಎಸ್. ಕುಮಾರ್, ಪ್ರಮೋದ, ವಿಸ್ತರಣೆ ಅಧಿಕಾರ, ಕೆ ನಾಗೇಶ್,ಸುರೇಶಆಚಾರ್,ಸಿ. ಕೃಷ್ಣ, ಎಇಇ ಪಿ.ಚರಿತ,ಬಿಇ ಒ ಶಿವಮೂರ್ತಿ,ಪಿಡಿಒ ಪೂರ್ಣಿಮಾ ಮುಂತಾದವರು ಹಾಜರಿದ್ದರು