ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ
ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ಗಾಂಧಿ ತಂದ ಸ್ವಾತಂತ್ರ ಮತ್ತು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ನಮ್ಮ ದೇಶದ ಹೆಮ್ಮೆಯ ಸಂಗತಿಗಳು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆದ 78 ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅದೇಷ್ಟೇ ಮಂದಿ ಸ್ವತಂತ್ರಕ್ಕಾಗಿ ದುಡಿದಿದ್ದಾರೆ ಅಲ್ಲದೇ ಮಡಿದಿದ್ದಾರೆ, ಅವರ ಶ್ರಮಕ್ಕೆ ಕುಂದು ಬಾರದ ರೀತಿ ನಡೆದುಕೊಂಡು ಹೋಗಬೇಕು ಎನ್ನುವರು ದೇಶ ರಕ್ಷಣೆಯ ಕೆಲಸಗಳಿಗೆ ತೊಡಗಿಕೊಳ್ಳಬೇಕು ಎಂದರು.
ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಹೊಂದಿತ್ತು, ಈಗ ಅಭಿವೃದ್ಧಿ ಹೊಂದಿದ ತಾಲೂಕಾಗಿದ್ದು, ಇದಕ್ಕಾಗಿ ತಂದೆಯವರ ಶ್ರಮದ ಮತ್ತು ನಾನುಸಹ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ ಎಂದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ‘ಸುಮಾರು 200 ವರ್ಷಗಳ ಬ್ರಿಟೀಷ್ ಆಳ್ವಿಕೆಯಿಂದ ವಿಮುಕ್ತಿ ಹೊಂದಿದ ಈ ದಿನವನ್ನು ಸ್ವತಂತ್ರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ದಿನಕ್ಕಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನು ತೆತ್ತಿದ್ದು, ಮತ್ತೆ ವಿದೇಶಿಗರ ಆಕ್ರಮಣಕ್ಕೆ ಒಳಗಾಗದ ರೀತಿ ಇಂದಿನ ಯುವ ಜನತೆ ಗಮನಹರಿಸಬೇಕು ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಧರಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಸ್ವಾಮಿ, ಟಿಎಚ್ಓ ರವಿಕುಮಾರ್, ಗೋಪಾಲಕೃಷ್ಣ, ಡಿ.ವೈ.ಎಸ್.ಪಿ.ಗೋಪಾಲಕೃಷ್ಣ, ಎಇಇ ರಾಮೇಗೌಡ, ಸಿಡಿಪಿಓ ಆಶಾ, ಹಿಂದುಳಿದ ವರ್ಗಗಳ ಇಲಾಖೆಯ ಸಹಾಉಕ ನಿರ್ದೇಶಕಿ ಶಶಿಕಲಾ, ಕೃಷ್ಣಮೂರ್ತಿ, ಮಹದೇವಯ್ಯ, ಕೆ.ಇ.ಬಿ. ಚಂದುಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮಯ್ಯ, ಇನ್ಸ್ಫೆಕ್ಟರ್ ಶಬ್ಬೀರ್ ಹುಸೇನ್, ಪಶು ವೈದ್ಯಾಧಿಕಾರಿ ಪ್ರಸನ್ನ, ಗ್ರೇಡ್ 2 ತಹಸೀಲ್ದಾರ್ ಪ್ರಸನ್ನ, ಮುಖಂಡ ಮೊತ್ತ ಬಸವರಾಜಪ್ಪ, ಎಚ್.ಸಿ.ನರಸಿಂಹಮೂರ್ತಿ, ಬಿ.ನಂದೀಶ್ ಮಾದಾಪುರ, ಮಂಜು ಬೀಚನಹಳ್ಳಿ, ಕನ್ನಡಪ್ರಮೋದ್, ಪುಟ್ಟಬಸವ, ಗಂಗರಾಜು, ದಾಕ್ಷಾಯಿಣಿ ಬಸವರಾಜು, ಈರೇಗೌಡ, ಕಾವೇರ, ಬಿ.ಬಸವರಾಜು, ಮಹದೇವನಾಯಕ, ಎ.ಎಸ್.ಮಹದೇವ ಇದ್ದರು.