ಪಿಎಸ್ಐ ಚೇತನ್ ಕುಮಾರ್ ಅಭಿಪ್ರಾಯ
ಪ್ರತಿನಿಧಿ ವರದಿ ಹುಲ್ಲಹಳ್ಳಿ
ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯತೆಯ ಕರ್ತವ್ಯವಾಗಿದೆ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಅವರು ಹೇಳಿದರು.
ಗ್ರಾಪಂ ಆವರಣದಲ್ಲಿ ಮೈಕ್ರೋ ಕ್ಯಾಪಿಟಲ್ ಲಿಮಿಟೆಡ್ ಫೈನಾನ್ಸ್ ವತಿಯಿಂದ ಏರ್ಪಡಿಸಿದ ಮರ ನೆಡುವ ಅಭಿಯಾನದ ವನಮಹೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಹಸಿರೇ ಉಸಿರು ಮನುಷ್ಯ ಆಹಾರ ಇಲ್ಲದೆ ಬದುಕಬಹುದು ಆದರೆ ಗಾಳಿ ನೀರು ಇಲ್ಲದೆ ಬದುಕಲಾರ ನಾವುಗಳು ಮರ ಗಿಡಗಳನ್ನು ರಕ್ಷಣೆ ಮಾಡಬೇಕು. ಪರಿಸರದಿಂದ ನಾವು ನಮ್ಮಗಳಿಂದ ಪರಿಸರವಲ್ಲ. ಪರಿಸರ ನಮಗೆ ಎಲ್ಲವನ್ನು ನೀಡಿದೆ ಆದರೆ ನಾವುಗಳು ದುರಾಸೆಯಿಂದ ಎಲ್ಲವನ್ನು ನಾಶ ಮಾಡುತ್ತಿದ್ದೇವೆ ಎಂದು ಹೇಳಿದರು.
ಮೈಕ್ರೋ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್ ಅವರು ಇಂತಹ ಕಾರ್ಯಕ್ರಮಗಳನ್ನು ಶಾಲೆ ಕಾಲೇಜುಗಳ ಪ್ರತಿ ಜತೆಯಲ್ಲಿ ಗ್ರಾಮಗಳಲ್ಲಿ ಮರ ಗಿಡಗಳ ಬಗ್ಗೆ ಹರಿವನ್ನು ಮೂಡಿಸಬೇಕು. ನಾವೆಲ್ಲರೂ ಒಂದೊಂದು ಗಿಡವನ್ನು ನೆಟ್ಟರೆ ಸಾಕು ಅದನ್ನು ಉಳಿಸಿ ಬೆಳೆಸಿದರೆ ಉತ್ತಮವಾದ ಪರಿಸರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಹುಚ್ಚಯ್ಯ, ಸದಸ್ಯ ಎಚ್.ಜೆ.ಮಲ್ಲಿಕಾರ್ಜುನ, ಶಿವಣ್ಣ, ಜೆ.ನಾಗೇಂದ್ರ, ಸೋಮಶೇಖರ್, ಜಯಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.