ನಗರದ ಪೊಲೀಸ್ ಬಡಾವಣೆಯಲ್ಲಿ (ಐಪಿಎಸ್ ಶ್ರೀನಿವಾಸನ್ ನಗರ) ಆಯೋಜಿಸಲಾಗಿದ್ದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು ಧ್ವಜಾರೋಹಣ ನೆರವೇರಿಸಿದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಪದಾಧಿಕಾರಿಗಳಾದ ಶಂಕರೇಗೌಡ, ನಾಗಣ್ಣ, ಶಿವರಾಮ್, ನರಸಿಂಹಯ್ಯ, ಸತೀಶ್ ಗೌಡ, ಲಕ್ಷ್ಮೀಪತಿ, ಸ್ವಾಮಿ, ಮಲ್ಲೇಶಯ್ಯ ಸಿದ್ದರಾಮಪ್ಪ, ಹೊನ್ನಪ್ಪ, ಸಿದ್ದೇಶ್, ಕೆಂಪಯ್ಯ ಮತ್ತಿತರರು ಇದ್ದರು.