ಪ್ರತಿನಿಧಿ ವರದಿ ಹನೂರು
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಸಿಡಿಮದ್ದು ಸಿಡಿದು ಎರಡು ಹಸುಗಳಿಗೆ ಗಂಭೀರ ಗಾಯವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಕೌದಳ್ಳಿ ಗ್ರಾಮದ ರೈತ ಮಹಿಳೆ ಅಕ್ಕಮ್ಮ ಎಂಬುವವರಿಗೆ ಸೇರಿದ ಹಸುಗಳು, ಕಿಡೆಗೇಡಿಗಳು ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದಿಗೆ ಗಂಭೀರ ಗಾಯಗಳಾಗಿದೆ.
ಇಂದು ಬೆಳಗ್ಗೆ ಎಂದಿನಂತೆ ಜಮೀನಿನ ಸಮೀಪ ಮೇವು ಅರಸಿ ತೆರಳಿದ್ದ ರಾಸುಗಳು ಮೇವಿಗೆ ಭಾಯಿ ಹಾಕುತ್ತಿದ್ದಂತೆ ಸಿಡಿದ ಸಿಡಿಮದ್ದಿಗೆ ಹಸುಗಳ ಮುಖ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಗಾಯವಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ರಾಮಾಪುರ ಪೋಲೀಸ್ ಠಾಣೆಯ ಸಿಬ್ಬಂಧಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.