ಪ್ರತಿನಿಧಿ ವರದಿ ಹನೂರು
ಆರ್.ಎಸ್.ದೊಡ್ಡಿ ಬಡಾವಣೆಯಲ್ಲಿ ಸೋಮವಾರ ತಡರಾತ್ರಿ ರಭಸವಾಗಿ ಸುರಿದ ಮಳೆಗೆ ಮನೆ ಗೋಡೆ ಕುಸಿದ್ದಿದೆ.
ಪಟ್ಟಣದ ಆರ್.ಎಸ್.ದೊಡ್ಡಿಯ ೧೩ನೇ ವಾರ್ಡಿನಲ್ಲಿ ರಾಜಮ್ಮ ಕೋಂ ಲೇಟ್ ಮಾದೇವಶೆಟ್ಟಿ ಅವರಿಗೆ ಸೇರಿದ ಮನೆಗೋಡೆ ನೆಲಕ್ಕೆ ಅಪ್ಪಳಿಸಿದೆ. ಅದೃಷ್ಟವಸಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ತಡರಾತ್ರಿ ಸುರಿದ ಮಳೆಗೆ ಮಣ್ಣಿನ ಗೋಡೆ ತೇವಾಂಶವಾಗಿದ್ದು ಗೋಡೆ ಉರುಳಿದೆ, ಅಲ್ಲಿದ್ದ ಕೆಲವು ಪರಿಕರಗಳು ಹಾನಿಯಾಗಿದೆ. ವಿಷಯ ತಿಳಿದ ೧೩ನೇ ವಾರ್ಡ್ ನ ಪಂಚಾಯತಿ ಸದಸ್ಯ ಮಹೇಶ ಘಟನಾಸ್ಥಳಕ್ಕೆ ಭೇಟಿ ನೀಡಿ ನಷ್ಟಕೊಳ್ಳದವರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಇದಕ್ಕೆ ಪರಿಹಾರ ಕೊಡಿಸಲೂ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡುವೆ ಎಂದು ದೈರ್ಯ ತುಂಬಿದ್ದಾರೆ. ೧೩, ೧೨ನೇ ವಾರ್ಡ್ ನಲ್ಲಿ ಕೆಲವು ಮಣ್ಣಿನಿಂದ ಕೂಡಿದ ಮನೆಗಳು ಇದ್ದು ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಮಂಜೂರು ಆಗುವಂತೆ ಮಾಡಲು ಶ್ರಮೀಸಲಾಗುವುದು ಎಂದರಲ್ಲದೆ, ಮನೆ ಹಾನಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಸ್ಥಳಕ್ಕೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ, ಹನೂರು ಪಪಂ ಮುಖ್ಯಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನೆಡೆಸಿದರೆ. ಬಳಿಕ ಅಗತ್ಯ ಮಾಹಿತಿ ಪಡೆದುಕೊಂಡು ಸರ್ಕಾರದಿಂದ ದೊರೆಯುವ ಪರಿಹಾರವನ್ನು ಒದಗಿಸಲು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.