ಕೆ ಆರ್ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗೆ ಲೀಗಲ್ ನೋಟೀಸ್ ನೀಡಿದ್ದಾರೆ. ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶ್ರೀವತ್ಸ ವಿರುದ್ಧ ಅಸಂಬದ್ಧ ಪದ ಬಳಸಿ ನಿಂದಿಸಿದ್ದ ಲಕ್ಷ್ಮಣ್ ವಿರುದ್ಧ ಶಾಸಕ ಶ್ರೀವತ್ಸ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಮುಡಾ ಪ್ರಕರಣ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡದಿದ್ದಲ್ಲಿ, ಅರವಿಂದ್ ಕೇಜ್ರಿವಾಲ್ ರೀತಿ ಜೈಲಿನಲ್ಲಿ ಕುಳಿತು ಆಡಳಿತ ಮಾಡುವ ಪರಿಸ್ಥಿತಿ ಅವರಿಗೂ ಬರಬಹುದು ಎಂದು ಹೇಳಿಕೆ ನೀಡಿದ್ದ ಶಾಸಕ ಶ್ರೀವತ್ಸ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಅವಾಚ್ಯ ಶಬ್ದಗಳಿಂದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶ್ರೀವತ್ಸಗೆ ನಿಂದಿಸಿದ್ದರು.
ತಾಕತ್ತಿದ್ದರೆ, ನಿಮ್ಮ ವಂಶಸ್ಥರಿಗೆ ನೀನು ಹುಟ್ಟಿದ್ದರೆ ಸಿದ್ದರಾಮಯ್ಯರನ್ನು ಜೈಲಿಗೆ ಹಾಕಿಸು ನೋಡೋಣ ಎಂದು ಟೀಕಿಸಿದ್ದ ಲಕ್ಷ್ಮಣ್ ವಿರುದ್ಧ ಇದೀಗ ಶಾಸಕ ಲೀಗಲ್ ನೋಟೀಸ್ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ 7 ದಿನಗಳ ಒಳಗಾಗಿ ಕ್ಷಮೆ ಯಾಚಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನೋಟೀಸ್ ಮುಖಾಂತರ ಎಚ್ಚರಿಕೆಯನ್ನ ನೀಡಿದ್ದಾರೆ.