ಅರ್ಧಕ್ಕೆ ನಿಂತ ಅಂಗನವಾಡಿ ಕಟ್ಟಡ ಕಾಮಗಾರಿ । ಎತ್ತ ನೋಡಿದರೂ ಕಸದ ರಾಶಿ । ಕಂಡರೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು । ಗ್ರಾಮಸ್ಥರ ಆರೋಪ
ಸುರೇಶ್ ಅಜ್ಜೀಪುರ ಹನೂರು
ಎತ್ತ ನೋಡಿದರೂ ಕಸದ ರಾಶಿ, ಹೂಳು ತುಂಬಿರುವ ಚರಂಡಿ, ಶಿಥಿಲಾವ್ಯಸ್ಥೆಯಲ್ಲಿರುವ ಕುಡಿಯುವ ನೀರಿನ ತೊಂಬೆ, ಅರ್ಧಕ್ಕೆ ನಿಂತ ಅಂಗನವಾಡಿ ಕಾಮಗಾರಿ ಕಟ್ಟಡ ಇದು ಕೆ.ಗುಂಡಾಪುರ ಗ್ರಾಮದ ಪರಿಸ್ಥಿತಿ.
ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಗುಂಡಾಪುರ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಧಿಕಾರಿಗಳು ಜನಪ್ರತಿನಿದಿನಗಳು ಕಂಡರೂ ಕಾಣದಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆ.ಗುಂಡಾಪುರ ಗ್ರಾಮದಲ್ಲಿ ಸುಮಾರು ಎಲ್ಲ ಕೋಮಿನ ಸಮುದಾಯದ ಜನರು ಒಟ್ಟಾಗಿ ಬದುಕುತ್ತಿದ್ದೂ 300ಕ್ಕೂ ಹೆಚ್ಚು ಕುಟುಂಬ ಇಲ್ಲಿ ವಾಸ ಮಾಡುತ್ತಿದೆ.
ಕಸದ ರಾಶಿ: ಕೆ.ಗುಂಡಾಪುರ ಗ್ರಾಮದಲ್ಲಿ ಕಸದ ರಾಶಿ ಎಲ್ಲೆಂದರಲ್ಲಿ ಕಾಣ ಸಿಗುತ್ತಿದ್ದೂ, ಕಸ ಎಲ್ಲೆಂದರಲ್ಲಿ ಬಿದ್ದಿದೆ. ಇದರಿಂದ ಸಾರ್ವಜನಿಕವಾಗಿ ತಿರುಗಾಡಲು ಸಹ ತೊಂದರೆಯಾಗಿದೆ. ಕಸದ ರಾಶಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ಗಳೆ ಬಿದ್ದಿದ್ದು, ಸ್ಥಳೀಯ ನಿವಾಸಿಗಳಿಗೆ ತುಂಬಾ ತೊಂದರೆಯಾಗಿದೆ. ಸ್ಥಳೀಯರಿಗೆ ತುಂಬಾ ಮಾನಸಿಕ ಹಾಗೂ ದೈಹಿಕವಾಗಿ ಕಿರಿಕಿರಿಯಾಗುತ್ತಿದ್ದೂ, ಆದಷ್ಟು ಬೇಗ ಕಸವನ್ನು ಬೇರೆಡೆ ಸಾಗಿಸಬೇಕು ಜತೆಗೆ ಕಸದ ತೊಟ್ಟಿಗಳನ್ನು ಹಾಕುವುದರ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ತೊಂಬೆ ಶಿಥಿಲ: ಗ್ರಾಮಕ್ಕೆ ಕುಡಿಯುವ ನೀರಿನ ತೊಂಬೆ ಅಳವಡಿಸಿ ಸಾಕಷ್ಟು ವರ್ಷ ಕಳೆದಿದ್ದು, ಇದೀಗ ಅದರ ಅಡಿಯಲ್ಲಿ ಮತ್ತು ಮೇಲಿನ ಭಾಗ ಕಾಂಕ್ರೀಟ್ ಕಿತ್ತು ಬೀಳುತ್ತಿದೆ. ಅಲ್ಲದೇ ನೀರು ಕೇಳಭಾಗದಲ್ಲೆ ನೀರು ಪೋಲಾಗುತ್ತದೆ. ಕಾಂಕ್ರೀಟ್ ಕಿತ್ತು ಬೀಳುತ್ತಿರುವ ಓವರ್ ಹೆಡ್ ಟ್ಯಾಂಕ್ ಮುಂದಿನ ದಿನಗಳಲ್ಲಿ ಅನಾಹುತವಾಗುವ ಮುನ್ಸೂಚನೆ ಇದ್ದು, ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿ ಹೂಳು ತೆಗೆಸಿ: ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಅದೆಷ್ಟೋ ವರ್ಷಗಳೇ ಕಳೆದಿದೆ ಜತೆಗೆ ಸದ್ಯ ಹೂಳು ತುಂಬಿದ್ದು, ಗಬ್ಬು ನಾರುತ್ತಿದೆ. ಇದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಸ್ಥಳೀಯ ನಿವಾಸಿಗಳಿಗೆ ಸೊಳ್ಳೆಗಳಿಂದ ಬರುವ ಡೆಂಘೆ ಭಯದ ನಿರ್ಮಾಣ ಮನೆ ಮಾಡಿದೆ. ಅಲ್ಲದೇ ಇದೆ ಮಾರ್ಗವಾಗಿ ಶಾಲಾ ಮಕ್ಕಳು ಸಹ ಪ್ರತಿನಿತ್ಯ ತಿರುಗಾಡುತ್ತಿದ್ದೂ, ಅವರಿಗೂ ಆತಂಕ ಎದುರಾಗಿದೆ. ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹೇಳಿದರು.
ಉಪಯೋಗಕ್ಕೆ ಬಾರದ ಅಂಗನವಾಡಿ ಕಟ್ಟಡ: ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರದ ಕಾಮಗಾರಿ ಯಾಗಿದ್ದರು ಸಹ ಇನ್ನು ಬಿಲ್ ಆಗಿಲ್ಲ. ಜತೆಗೆ ಇನ್ನು ಕಾಮಗಾರಿ ಮುಗಿದಿಲ್ಲ ಎಂಬ ಕಾರಣ ನೀಡಿ ಕಳೆದ 5 ವರ್ಷದಿಂದ ಆಮೆ ಗತಿಯಲ್ಲೇ ಸಾಗುತ್ತಿದೆ. ಅಂಗನವಾಡಿ ಕಟ್ಟಡ ಆದಷ್ಟು ಬೇಗ ಮಕ್ಕಳಿಗೆ ಸಿಗಲಿ ಎಂದು ಪ್ರಜ್ಞಾವಂತ ನಾಗರಿಕರು ಹಾಗೂ ಅಂಗನವಾಡಿ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
——————–
ಕೋಟ್
ಗ್ರಾಮದಲ್ಲಿ ಚರಂಡಿ ಹೂಳು ತೆಗೆಸಲು ಹಾಗೂ ಕಸ ತೆರವು ಮಾಡಿಸುವುದರ ಜತೆಗೆ ಓವರ್ ಹೆಡ್ ಟ್ಯಾಂಕ್ ಬಗ್ಗೆ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ.
– ಪವನ್ ಕುಮಾರ್, ಕಾರ್ಯದರ್ಶಿ, ಬಸಪ್ಪನದೊಡ್ಡಿ ಗ್ರಾಮ ಪಂಚಾಯಿತಿ.
ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕಾಮಗಾರಿ ಅರ್ಧಕ್ಕೆ ನಿಂತಿರುವುದು ನನ್ನ ಗಮನಕ್ಕೆ ಬಂದಿದ್ದು, ಪ್ರಸ್ತುತ ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಬಂಧ ಪಟ್ಟವರ ಬಳಿ ಮಾಹಿತಿ ಕೇಳಲಾಗಿದ್ದೆ. ಮಾಹಿತಿ ಬಂದ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ.
– ಶಿವ ಪ್ರಕಾಶ್, ಎಇಇ
—————–
ಚಿತ್ರ: ಕೆ.ಗುಂಡಾಪುರ ಗ್ರಾಮದಲ್ಲಿ ಚರಂಡಿ ಹೂಳು ತೆಗೆಸದೆ ನೀರು ನಿಂತಲ್ಲೇ ನಿಂತು ಗಬ್ಬು ನಾರುತ್ತಿದೆ.
ಚಿತ್ರ: ಕೆ.ಗುಂಡಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕಾಮಗಾರಿ ನೆಪ ಹೇಳಿ ಮಕ್ಕಳಿಗೆ ಸದುಪಯೋಗ ವಾಗದಿರುವುದು.
ಚಿತ್ರ: ಕೆ.ಗುಂಡಾಪುರ ಗ್ರಾಮದಲ್ಲಿ ಓವರ್ ಹೆಡ್ ಟ್ಯಾoಕ್ ಕಾಂಕ್ರೀಟ್ ಕಿತ್ತು ಬೀಳುತ್ತಿರುವುದು.
ಚಿತ್ರ: ಕಸದ ರಾಶಿ ಚೆಲ್ಲಿರುವುದು.