ಸಾಹಿತಿ ಶಿವಣ್ಣ ಇಂದ್ವಾಡಿ ಅಭಿಪ್ರಾಯ
ಪ್ರತಿನಿಧಿ ವರದಿ ಕೊಳ್ಳೇಗಾಲ
ಶಿವ ಶರಣರ ಬದುಕೇ ನಮಗೆ ದಾರಿದೀಪ. ಅವರ ಬದುಕೇ ನಮಗೆ ಮಾರ್ಗದರ್ಶನ. ಶರಣರ ವಚನಗಳು ನಮ್ಮ ಕಿವಿಯ ಮೇಲೆ ಬೀಳುತ್ತಾ, ಪ್ರಭಾವ ಬೀರುತ್ತಾ, ನಮ್ಮ ಜೀವನವನ್ನು ಸರಿ ದಾರಿಗೆ ಕರೆದ್ಯೊಯುತ್ತವೆ ಎಂದು ಸಾಹಿತಿ ಶಿವಣ್ಣ ಇಂದ್ವಾಡಿ ತಿಳಿಸಿದರು.
ಪಟ್ಟಣದ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಜಗಜ್ಯೋತಿ ಶ್ರೀ ಬಸವೇಶ್ವರ(ಜೆಎಸ್ಬಿ) ಪ್ರತಿಷ್ಠಾನ ಹಾಗೂ ಎಚ್.ಕೆ. ಟ್ರಸ್ಟ್ ಸಹಯೋಗದೊಂದಿಗೆ ವಚನ ಶ್ರಾವಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸು ಮಲೀನಗೊಂಡಿರುವ ಈ ಪ್ರಸ್ತುತ ಸಮಯದಲ್ಲಿ ನಾವು ಸುಂದರ ಸಮಾಜ ಕಟ್ಟಲು ವಚನಗಳ ಆಂದೋಲನ ನಡೆಸಬೇಕಿದೆ. ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಅನುಭಾವ ಸಾರವನ್ನು ಕಟ್ಟಿಕೊಟ್ಟವರು ನಮ್ಮ ಬಸವಾದಿ ಶರಣರು ಎಂದು ಬಣ್ಣಿಸಿದರು.
ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ಶಿವ ಶರಣರ ವಚನಗಳನ್ನು ದಿನಕ್ಕೊಂದರಂತೆ ಓದುವುದರಿಂದ ಕಂಡಿತ ನಾವು ಉನ್ನತವಾದ ಸ್ಥಾನಕ್ಕೆ ಏರುತ್ತೇವೆ. ನಾವೆಲ್ಲರೂ ಇಂದಿನಿಂದ ವಚನಗಳ ಅಧ್ಯಯನದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಜೆ.ಎಸ್.ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್ ಮಾತನಾಡಿದರು.
ವಾಚನ ಗಾಯನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ ನೀಡಿ, ವಚನ ಓದನ್ನು ಪ್ರೋತ್ಸಾಹಿಸಲಾಯಿತು.
ಸುಗಮ ಸಂಗೀತಗಾರ ಕೆ.ಶಿವನಂಜು ಸಂಗೀತ ಸುಧೆಯನ್ನು ಹರಿಸಿ, ನೆರೆದಿದ್ದ ಎಲ್ಲರನ್ನೂ ಸಂಗೀತದ ಅಲೆಯಲ್ಲಿ ತೇಲಿಸಿದರು. ವಿಶ್ವಚೇತನ ವಿದ್ಯಾಸಂಸ್ಥೆಯ ಸಂಚಾಲಕರಾದ ರಾಜೇಶ, ಜಗದೀಶ, ಪ್ರಾಂಶುಪಾಲರಾದ ಭಾಸ್ಕರನ್, ಅಕ್ಬರ್ ಸೇರಿದಂತೆ ಇತರರು ಇದ್ದರು.
21ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಜಗಜ್ಯೋತಿ ಶ್ರೀ ಬಸವೇಶ್ವರ(ಜೆಎಸ್ಬಿ) ಪ್ರತಿಷ್ಠಾನ ಹಾಗೂ ಎಚ್.ಕೆ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮವನ್ನು ಸಾಹಿತಿ ಶಿವಣ್ಣ ಇಂದ್ವಾಡಿ ಅವರು ಉದ್ಘಾಟಿಸಿ ಮಾತನಾಡಿದರು.