ಪ್ರತಿನಿಧಿ ವರದಿ ಚಾಮರಾಜನಗರ
ತಾಲೂಕಿನ ಪುಣಜನೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಕೋಳಿಪಾಳ್ಯ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ, ನೀರುಗಾಲುವೆ ಕಾಮಗಾರಿಯನ್ನು ಗ್ರಾಪಂ ಅಧ್ಯಕ್ಷೆ ಶಿವಿಬಾಯಿಗ ಣೇಶ್ ನಾಯ್ಕ ಪರಿಶೀಲಿಸಿದರು.
ನಂತರ ಅವರು ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಕೋಳಿಪಾಳ್ಯ ಗ್ರಾಮದಲ್ಲಿ 300 ಎಕರೆ ಜಮೀನಿಗೆ ಹೋಗಲು ಅನುಕೂಲ ಆಗುವಂತೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ನೀರುಗಾಲುವೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಭಾಗದ ಜನರ ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 100 ರಿಂದ 120 ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದರು.
ನರೇಗಾ ಯೋಜನೆಯ ಓಂಬುಡ್ಸ್ ಮನ್ ಎ.ಬಿ.ಶಂಕರ್, ಪಿಡಿಒ ನಾಗನಾಯಕ, ಗ್ರಾಪಂ ಸದಸ್ಯರಾದ ಮಹೇಶ್ ನಾಯ್ಕ, ಲಲಿತಾ ಬಾಯಿ, ಮುಖಂಡರಾದ ರಾಜೇಂದ್ರ ನಾಯಕ್, ಸುರೇಶ್ ನಾಯಕ್, ರವೀಂದ್ರ ನಾಯಕ್, ಗುಂಗೋ ಬಾಲು ನಾಯಕ್, ಪುಟ್ಟುಸ್ವಾಮಿಗೌಡರು ಗುರುನಾ ಯಕ್,ಪ್ರವೀಣ್ ನಾಯಕ್, ಭಗವಾನ್ ಇದ್ದರು.
22ಸಿಎಚ್ಎನ್.4: ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಪಾಳ್ಯ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ, ನೀರುಗಾಲುವೆ ಕಾಮಗಾರಿಯನ್ನು ಗ್ರಾ.ಪಂ.ಅಧ್ಯಕ್ಷೆ ಶಿವಿಬಾಯಿಗ ಣೇಶ್ ನಾಯ್ಕ ಪರಿಶೀಲಿಸಿದರು.