ಪ್ರತಿನಿಧಿ ವರದಿ ಚಾಮರಾಜನಗರ
ನಗರದ 16ನೇ ವಾರ್ಡ್ ನಿವಾಸಿಗಳು ನಗರಸಭಾ ಪೌರಾಯುಕ್ತ ರಾಮದಾಸ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ರಾಮದಾಸ್, ನಗರದ ವಾರ್ಡ್ ಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಗರದ ಎಲ್ಲ ವಾರ್ಡ್ ಗಳ ಜನರು ಸಮಸ್ಯೆ ಇದೆ ಎಂದು ನನಗೆ ಮತ್ತು ಕಚೇರಿಗೆ ದೂರವಾಣಿ ಕರೆ ಮಾಡಿದರೆ ತಕ್ಷಣವೇ ಸ್ಪಂಧಿಸಿ, ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ವಾರ್ಡ್ ನ ನಿವಾಸಿ ಆಟೋಮಂಜುನಾಥ್, ನಾಗನಾಯಕ, ಸಿದ್ದನಾಯಕ, ಗಣೇಶನಾಯಕ, ತಮ್ಮಯ್ಯನಾಯಕ ಇದ್ದರು.