ಈಗ ನಾವು ರಾಷ್ಟ್ರಪತಿಗಳ ಬಳಿಗೆ ಹೋಗಬೇಕಾದ ಸ್ಥಿತಿ ಬಂದಿದೆ, ರಾಜ್ಯಪಾಲರ ಕಚೇರಿಯನ್ನ ಪಕ್ಷದ ಕಚೇರಿಯಾಗಿ ಬಿಜೆಪಿ ಬಳಸುತ್ತಿದೆ ಹೀಗಾಗಿ ನಮ್ಮ ರಕ್ಷಣೆಗೆ ರಾಷ್ಟ್ರಪತಿಗಳು ಬರಬೇಕಿದೆ ಎಂದು ಶಾಸಕ ತನ್ವೀರ್ ಸೇಠ್ ಮೈಸೂರಿನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ದೆಹಲಿ ಪೆರೇಡ್ ವಿಚಾರವಾಗಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ದೆಹಲಿಗೆ ಪೇರೆಡ್ ಹೋಗಲು ಚರ್ಚೆ ನಡೆದಿದೆ ಆದರೆ ಯಾವತ್ತು ಏನು ಎಂಬುದು ಇನ್ನೂ ತೀರ್ಮಾನ ಆಗಿಲ್ಲ.ರಾಜ್ಯಪಾಲರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈಗ ನಾವು ರಾಷ್ಟ್ರಪತಿಗಳ ಬಳಿಗೆ ಹೋಗಬೇಕಾದ ಸ್ಥಿತಿ ಬಂದಿದೆ, ರಾಜ್ಯಪಾಲರ ಕಚೇರಿಯನ್ನ ಪಕ್ಷದ ಕಚೇರಿಯಾಗಿ ಬಿಜೆಪಿ ಬಳಸುತ್ತಿದೆ ಹೀಗಾಗಿ ನಮ್ಮ ರಕ್ಷಣೆಗೆ ರಾಷ್ಟ್ರಪತಿಗಳು ಬರಬೇಕಿದೆ, ಕಾನೂನಾತ್ಮಕವಾಗಿ ಇರುವ ಎಲ್ಲಾ ಅವಕಾಶಗಳನ್ನ ಬಳಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಮುಡಾ ಹಗರಣ ಸಂಬಂಧ ಸಿಎಂ ಪತ್ನಿ ಕೊಟ್ಟಿರುವ ಪತ್ರದಲ್ಲಿ ವೈಟ್ನರ್ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪತ್ರದಲ್ಲಿ ಹೇಳಬೇಕಾಗಿರುವುದನ್ನ ಸರಿಯಾಗಿ ಹೇಳಿದ್ದಾರೆ ಅದರಲ್ಲಿ ಯಾವ ತಪ್ಪು ಇಲ್ಲ. ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೇಳಿದ್ದಾರೆ ಬರೆಯುವಾಗ ಏನೋ ತಪ್ಪಾಗಿದೆ, ಅದಕ್ಕೆಂದು ವೈಟ್ನರ್ ಹಾಕಿರಬಹುದು. ತನಿಖೆಯಲ್ಲಿ ಗೊತ್ತಾಗುತ್ತೆ ಯಾರು ವೈಟ್ನರ್ ಹಾಕಿದ್ದು ಎಂದು ಹೇಳಿದ್ದಾರೆ. ನಾನು ಶಾಸಕನಾಗಿ ಮುಡಾದ ಎಲ್ಲಾ ಸಭೆಯಲ್ಲಿ ಭಾಗಿಯಾಗಿದ್ದೇನೆ ಸಿಎಂ ಪತ್ನಿಗೆ ನಿವೇಶನ ಕೊಟ್ಟಿರುವ ಬಗ್ಗೆ ತನಿಖೆ ನಡೆಯುತ್ತಿದೆ, ಈ ಹಂತದಲ್ಲಿ ಒಂದೊಂದೇ ರೀತಿಯ ವಿಶ್ಲೇಷಣೆ ಸರಿಯಲ್ಲ ಎಂದು
ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ವೈಟ್ನರ್ ವಿಚಾರಕ್ಕೆ ಸಮರ್ಥನೆ ನೀಡಿದ್ದಾರೆ.