ಆದಿ ಜಗದ್ಗುರು ಡಾ ಶ್ರೀ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜನ್ಮ ದಿನಾಚರಣೆ ಪ್ರಯುಕ್ತ ಸುತ್ತೂರು ಮಠದ ವತಿಯಿಂದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು.
ಆದಿ ಜಗದ್ಗುರು ಡಾ ಶ್ರೀ ರಾಜೇಂದ್ರ ಮಹಾಸ್ವಾಮಿಗಳ 109 ನೇ ಜನ್ಮ ದಿನಾಚರಣೆ ಪ್ರಯುಕ್ತವಾಗಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಶಿಕ್ಷಣ ವಿಭಾಗದ ಉಪ ನಿರ್ದೇಶಕ ನಿರಂಜನಮೂರ್ತಿ ಅವರು ಮೃಗಾಲಯದ ನಿರ್ದೇಶಕ ಮಹೇಶ್ ಅವರಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡುವ ಮೂಲಕ ದೇಣಿಗೆ ನೀಡಿದ್ದಾರೆ. ಪ್ರಾಣಿ ಪಕ್ಷಿಗಳ ಆಹಾರ, ಮೃಗಾಲಯದ ನಿರ್ವಹಣೆಗೆ ಕಳೆದ 15 ವರ್ಷಗಳಿಂದ ಜೆ ಎಸ್ ಎಸ್ ಸಂಸ್ಥೆ ದೇಣಿಗೆ ನೀಡುತ್ತಾ ಬಂದಿದೆ.
ಈ ವೇಳೆ ಮೃಗಾಲಯದ ನಿರ್ದೇಶಕ ಮಹೇಶ್ ಜೆಎಸ್ಎಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.