ಪ್ರತಿನಿಧಿ ವರದಿ ಸರಗೂರು
ತಾಲೂಕು ಕಟ್ಟೆ ಹುಣಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ವರದರಾಜು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ದುಶ್ಚಟ ಮತ್ತು ದುರಭ್ಯಾಸಗಳಿಂದ ದೂರವಿರಬೇಕು.ದುಶ್ಚಟ ಮಾಡುವ ವ್ಯಕ್ತಿಯನ್ನು ಸಮಾಜ ಕೀಳು ಮಟ್ಟದಲ್ಲಿ ಕಾಣುತ್ತದೆ, ಅದು ಅವನ, ಕುಟುಂಬದ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಚಾಮರಾಜ ನಾಯಕ್ ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯೂ ಕೂಡ ದುರಭ್ಯಾಸವಾಗಿದ್ದು, ಮಕ್ಕಳು ಇದರಿಂದ ದೂರವಿರಬೇಕು. ಹಾಗೂ ಪರಿಸರ ಸಂರಕ್ಷಣೆಯನ್ನು ಮಾಡಬೇಕು, ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳಬೇಕು ಎಂದ ಅವರು ವೀರೇಂದ್ರ ಹೆಗ್ಗಡೆ ಅವರ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಹುಲ್ಲಹಳ್ಳಿ ಯೋಜನಾಧಿಕಾರಿ ಗಣೇಶ್ ನಾಯಕ್ ಮಾತನಾಡಿದರು. ಮುಳ್ಳೂರು ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ಸಂಕಲ್ಪ ಪ್ರತಿಜ್ಞೆ ಬೋಧಿಸಿದರು . ಹುಲ್ಲಳ್ಳಿ ಯೋಜನಾಧಿಕಾರಿ ಗಣೇಶ್ ನಾಯಕ್, ಮೇಲ್ವಿಚಾರಕ ನರಸಿಂಹಮೂರ್ತಿ ಶಾಲೆಯ ಸಹ ಶಿಕ್ಷಕರಾದ ಕವಿತಾ ,ಪವಿತ್ರ, ಶಿಕ್ಷಕರಾದ ಚಾಮರಾಜ ನಾಯಕ್, ಶಶಿಕಲಾ ಮತ್ತು ಸಾಗರ್, ಸೇವಾ ಪ್ರತಿನಿಧಿ ಕೆಂಪರಾಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .