ಪ್ರತಿನಿಧಿ ವರದಿ ಚಾಮರಾಜನಗರ
ನಗರದ ಗ್ರಾಮ ದೇವತೆ ಶ್ರೀ ಮುದುಕು ಮಾರಮ್ಮ ಅಮ್ಮನವರ ಸನ್ನಿಧಿಯಲ್ಲಿ ಆ.28 ರಂದು ಶ್ರಾವಣ ಕೃಷ್ಣ ದಶಮಿ ನೂತನ ರಜತ ಪ್ರಭಾವಳಿ ಧಾರಣ ಪ್ರಯುಕ್ತ ಬೆಳಗ್ಗೆ 9ಗಂಟೆಗೆ ಗಣಪತಿ ಪೂಜಾ, ಪುಣ್ಯಾಹ, ದೇವ ನಾಂದಿ, ಪಂಚಗವ್ಯ, ಕಲಶ ಸ್ಥಾಪನೆ ಗಣಪತಿ ಹೋಮ, ನವಗ್ರಹ, ದುರ್ಗಾ ಹೋಮ ನೆರವೇರಲಿದೆ.
ಅಂದು ಮಧ್ಯಾಹ್ನ ದೇವಿಗೆ ರುದ್ರಾಭಿಷೇಕ ಹಾಗೂ ಮಹಾ ಪೂರ್ಣಾಹುತಿಯೊಂದಿಗೆ ಸಂಪನ್ನವಾಗಲಿದೆ. ಇದೇ ವೇಳೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವತಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಮಾರಿಗುಡಿ ದೇವಸ್ಥಾನದ ವತಿಯಿಂದ ಆಡಳಿತ ಮಂಡಳಿ ತಿಳಿಸಿದೆ.