ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣ ಅತ್ಯಂತ ಕ್ರೌರ್ಯವಾಗಿದೆ. ಮುಸ್ಲಿಮರನ್ನು ಬಚಾವ್ ಮಾಡಲು ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದು ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಕಾರ್ಕಳದ ಅತ್ಯಾಚಾರ ಪ್ರಕರಾನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಿಂದು ಹುಡುಗಿಗೆ ವ್ಯವಸ್ಥಿತವಾಗಿ ಡ್ರಗ್ ಕುಡಿಸಿ ಅತ್ಯಾಚಾರ ಮಾಡಿದ್ದಾರೆ. ಈ ರೀತಿಯ ಪ್ರಕರಣಗಳು ಇದೇ ಮೊದಲೇನಲ್ಲ, ಕೊನೆಯೂ ಅಲ್ಲ. ಡ್ರಗ್ ಮಾಫಿಯಾ ರಾಜ್ಯದಲ್ಲಿ ನಡೆಯುತ್ತಿದೆ ಎಂದಾದರೆ ಪೊಲೀಸರಿಗೆ ಗೊತ್ತಿಲ್ಲದೇ ಡ್ರಗ್ ಮಾಫಿಯಾ ನಡೆಯಲು ಸಾಧ್ಯವಿಲ್ಲ.
ಹೀಗಾಗಿ ಕಾರ್ಕಳ ಘಟನೆಗೆ ಪೊಲೀಸ್ ಇಲಾಖೆಯೇ ಜವಾಬ್ದಾರಿ ಹೊರಬೇಕು ಎಂದಿದ್ದಾರೆ. ಇಂದು ಹಿಂದು ಹುಡಿಗಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಾಂಗ್ರೆಸ್ ಸರ್ಕಾರವೂ ಕಾರಣ ಹೌದು ಎಂದಿರುವ ಇವರು, ತೃಷ್ಟೀಕರಣ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಮುಸ್ಲೀಮರಿಗೆ ಪ್ರೋತ್ಸಾಹ ಕೊಡುತ್ತಿದೆ. ಕಾರ್ಕಳದ ಮುಸ್ಲೀಮರು ಹೇಳಿಕೆ ನೀಡಿ ಅತ್ಯಾಚಾರ ಮಾಡಿದವರು ಸ್ಥಳೀಯರಲ್ಲ ಎಂದಿದ್ದಾರೆ. ಆದರೆ ಸ್ಥಳೀಯರು ಇಲ್ಲದೇ ಇರಬಹುದು ಆದರೆ ಮುಸ್ಲೀಮರೆ. ಅತ್ಯಾಚಾರ ಪ್ರಕರಣಗಳಿಗೆ ನ್ಯಾಯಾಲಯದ ನಿರ್ಲಕ್ಷ್ಯವೂ ಕಾರಣವಾಗಿದೆ. ಪ್ರಧಾನ ಮಂತ್ರಿ ಕಠಿಣ ಕಾನೂನು ಜಾರಿಗೆ ತರುತ್ತೇವೆ ಎಂದಿದ್ದಾರೆ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕಾನೂನು ಜಾರಿಗೆ ತರಬೇಕು ಎಂದ ಇವರು ಕರ್ನಾಟಕದಲ್ಲಿಯೂ ಮಧ್ಯಪ್ರದೇಶ, ಉತ್ತರಪ್ರದೇಶದ ಮಾದರಿಯಲ್ಲಿ ಆರೋಪಿಗಳ ಮನೆಯನ್ನು ಬುಲ್ಡೋಜರ್ ಮೂಲಕ ಬೀಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಮಸೂದೆ ತಿದ್ದುಪಡಿ ಮಾಡಿರುವುದನ್ನು ಸ್ವಾಗತ ಮಾಡುತ್ತೇವೆ ಎಂದ ಇವರು, ವಕ್ಫ್ ಬೋರ್ಡ್ ತುಂಬಾ ಡೇಂಜರಸ್ ಬೋರ್ಡ್ ಆಗಿದ್ದು, ಮುಸ್ಲಿಮರಿಗಾಗಿಯೇ ಹುಟ್ಟಿದೆ.
ಬೆಳಗಾವಿಯ ಹಿಂದುವಾಡಿಯಲ್ಲಿ 120 ಮನೆಗಳಿಗೆ ನೋಟಿಸ್ ಜಾರಿ ಮಾಡಿ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ ಇದರಿಂದಾಗಿ 120 ಕುಟುಂಬದ ಸ್ಥಿತಿ ಹೇಳದ ರೀತಿ ಆಗಿದೆ. ವಕ್ಫ್ ಬೋರ್ಡ್ ನ ನೋಟಿಸ್ ನಿಂದ ಈ ರೀತಿಯಾಗಿದೆ ಹೀಗಾಗಿ 40 ತಿದ್ದುಪಡಿಯನ್ನು 100% ಮಾಡಬೇಕು ಇಲ್ಲವಾದರೆ ವಕ್ಫ್ ಬೋರ್ಡನ್ನೇ ರದ್ದು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಭಾರತ ದೇಶ ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಲವ್ ಜಿಹಾದ್ ಹೆಲ್ಪ್ ಲೈನ್ ಮಾಡಿದ್ದೆ ಈ ನಂಬರ್ ಗೆ ಸಾಕಷ್ಟು ಕರೆಗಳು ಬರುತ್ತಿವೆ ಈ ಹಿಂದೆ ಸಾವಿರಾರು ಕರೆಗಳು ಕೂಡ ಬಂದಿವೆ. ಇಡೀ ರಾಜ್ಯದಲ್ಲಿ 32 ಹುಡುಗಿಯರನ್ನು ವಾಪಸ್ ಕರೆ ತರುವ ಮೂಲಕ ಲವ್ ಜಿಹಾದ್ ತಡೆಯಲು ಶ್ರೀರಾಮ ಸೇನೆ ಸಾಕಷ್ಟು ಕೆಲಸ ಮಾಡುತ್ತಿದೆ. ನಮ್ಮ ಕಾರ್ಯಕರ್ತರು 32 ಜನರ ಫೇಸ್ ಬುಕ್ ಖಾತೆಯನ್ನು ಕೂಡ ಬಂದ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆಗೆ ಸಾಕಷ್ಟು ಧಮ್ಕಿ ಬಂದಿದೆ ಎಂದು ಹೇಳಿದ್ದಾರೆ.
ಇನ್ನು ನಟ ದರ್ಶನ್ ವಿಚಾರವಾಗಿ ಮಾತನಾಡಿದ ಇವರು, ನಾನು ಸಹ 14 ದಿನ ಜೈಲಿನಲ್ಲಿದ್ದೆ ಆಗ ಸಾಕಷ್ಟು ಅಧ್ಯಯನ ಮಾಡಿದ್ದೇನೆ. 130 ಜನರ ಸಾವಿಗೆ ಕಾರಣರಾದ ಟೆರರಿಸ್ಟ್ ಮದನಿ ಜೈಲಿನಲ್ಲಿದ್ದರು ಅವರಿಗೆ ಎಸಿ ರೂಂ ವ್ಯವಸ್ಥೆ ಇತ್ತು. ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುವ ರೀತಿ ಅವರನ್ನ ಹೊತ್ತುಕೊಂಡು ಹೋಗುತ್ತಿದ್ದರು. ಗಾಂಜಾ ಬೀಡಿ ಸೀಗರೇಟ್ ಎಲ್ಲವೂ ಜೈಲಿನಲ್ಲಿ ಸಿಗುತ್ತೆ. ಈ ಬಗ್ಗೆ ಅಧ್ಯಯನ ಮಾಡಿದ ವರದಿಯನ್ನ ಅಂದಿನ ಕಾನೂನು ಸಚಿವ ಸುರೇಶ್ ಕುಮಾರ್ ಅವರಿಗೆ ಕೊಟ್ಟಿದ್ದೆ ಆದರೆ ಏನು ಸಹ ಆಗಲಿಲ್ಲ. ಕಾರಣ ಇಲ್ಲಿ ಎಲ್ಲರೂ ಖುರ್ಚಿಗಾಗಿ ಕೆಲಸ ಮಾಡುತ್ತಾರೆ. ದರ್ಶನ ರೌಡಿ ಶೀಟರ್ ಜೊತೆ ಕುಳಿತಿರುವುದು ಸರಿಯಲ್ಲ ಖಂಡಿಸಿದ್ದಾರೆ.