ಪ್ರತಿನಿಧಿ ವರದಿ ಹೊಳೆನರಸೀಪುರ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಹಾಸನ ಜಿಲ್ಲಾ ಘಟಕ ಮತ್ತು ಹೊಳೆನರಸೀಪುರ ತಾಲ್ಲೂಕು ಘಟಕದ ಸಹಯೋಗದೊಂದಿಗೆ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತುರ್ತು ಸಹಾಯ ನೀಡಲು ಮುಂದಾಗಿದೆ ಎಂದು ತಾಲೂಕು ಘಟಕದ ಸಭಾಪತಿ ಆರ್.ಬಿ. ಪುಟ್ಟೇಗೌಡ ತಿಳಿಸಿದರು.
ತಾಲೂಕಿನ ಹಡವನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದವರ ಮನೆಗೆ ಗುರುವಾರ ಭೇಟಿ ನೀಡಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಆಹಾರ ಸಾಮಗ್ರಿಗಳ ಕಿಟ್, ಒಂದು ದೊಡ್ಡ ಟಾರ್ಪಲ್, ಪಾತ್ರೆಗಳು, ಹಾಸಿಗೆ ಹೊದಿಕೆ, ಸೊಳ್ಳೆ ಪರದೆ, ಸೋಪು, ಟವಲ್, ಪೇಸ್ಟ್, ಬ್ರಷ್, ಸ್ವಚ್ಛ ತಾ ಕಿಟ್ , ಪಂಚೆ, ಸೊಳ್ಳೆ ನಿವಾರಕ ಬತ್ತಿ ಸೇರಿದಂತೆ ಅನೇಕ ವಸ್ತುಗಳನ್ನು ಗ್ರಾಮದ ಮಂಜುಳಾ ಬಿನ್ ಶಿವಣ್ಣ ಮತ್ತು ಮಂಜೇಗೌಡ ಬಿನ್ ಚಿಕ್ಕೇಗೌಡ ಅವರ ಕುಟುಂಬಗಳಿಗೆ ವಿತರಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಘಟಕದ ಪದಾಧಿಕಾರಿ ಶಂಕರನಾರಾಯಣ ಐತಾಳ್, ಹೆಚ್.ಆರ್.ಶಿವಕುಮಾರ್, ಹೆಚ್. ಆರ್.ನಿಂಗೇಗೌಡ, ಗ್ರಾಮದ ಚಿಕ್ಕೀರೇಗೌಡ, ಉಪಸ್ಥಿತರಿದ್ದರು