ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ.ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ತಾಲೀಮು ಮುಂದುವರಿದಿದೆ. ಕಂಜನ್ ಮತ್ತು ವರಲಕ್ಷ್ಮಿ ಆನೆಗಳು ಇಂದಿನ ತಾಲೀಮಿಗೆ ಗೈರು ಹಾಜರಿಯಾಗಿವೆ.ಅರಮನೆಗೆ ಬಂದ ಮರು ದಿನವೇ ತೂಕ ಪರೀಕ್ಷೆಗೆ ಹೋಗಿದ್ದ ಸಂದರ್ಭದಲ್ಲಿ ಕಂಜನ್ ಆನೆ ಕುಂಟುತ್ತಿತ್ತು.ಕೆಲ ದಿನಗಳ ಕಾಲ ತಾಲೀಮಿನಲ್ಲಿ ಭಾಗಿಯಾಗದೇ ವಿಶ್ರಾಂತಿ ಕಂಜನ್ ಆನೆ ವಿಶ್ರಾಂತಿ ಪಡೆಯುತ್ತಿತ್ತು.
ಮೊನ್ನೆಯಷ್ಟೇ ಸಂಜೆಯ ತಾಲೀಮಿನಲ್ಲಿ ಕಂಜನ್ ಭಾಗಿಯಾಗಿತ್ತು.ಮತ್ತೆ ಪಾದದ ನೋವಿನ ಹಿನ್ನೆಲೆಯಲ್ಲಿ ತಾಲೀಮಿಗೆ ಗೈರು ಹಾಜರಾಗಿದೆ.ವರಲಕ್ಷ್ಮೀ ಕೂಡ ಕಂಜನ್ ಜೊತೆ ಅರಮನೆಯ ಅಂಗಳದಲ್ಲಿ ವಿಶ್ರಾಂತಿ ಪಡೆದಿದೆ. ಅರಣ್ಯಾಧಿಕಾರಿಗಳು, ವೈದ್ಯರು ಸೇರಿ ಕಂಜನ್ ಆನೆಯ ಪಾದ ಪರಿಶೀಲಿಸಿದ್ದಾರೆ.ಎರಡು ಆನೆಗಳನ್ನು ಹೊರತು ಪಡಿಸಿ ಉಳಿದ 7 ಆನೆಗಳು ತಾಲೀಮಿನಲ್ಲಿ ಭಾಗಿಯಾಗಿವೆ.ಅರಮನೆಯಿಂದ ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆಯ ಮೂಲಕ ಆಯುರ್ವೇದ ವೃತ್ತದವರೆಗೆ ಸಾಗಿ ಮತ್ತೆ ಅರಮನೆಗೆ ವಾಪಸ್ ಆಗಿವೆ.