ಶಾಲೆಗೆ ಸೇರಿಸದ ಪೋಷಕರು, ದುಶ್ಚಟಗಳತ್ತ ಯುವಕರು । ಕೆಲಸಕ್ಕಾಗಿ ಮಲೆನಾಡಿಗೆ ವಲಸೆ
ಡಿ.ವಿ.ಸಂಜಯ್ ಚಿಕ್ಕಮಗಳೂರು
ಜಿಲ್ಲೆಯ ಮಲೆನಾಡು ಭಾಗದ ಸಾಕಷ್ಟು ಕಾಫಿ ತೋಟಗಳಲ್ಲಿ ಅಸ್ಸಾಂ ರಾಜ್ಯದಿಂದ ವಲಸೆ ಬಂದು ಕೂಲಿ ಕೆಲಸಕ್ಕೆ ಕಾರ್ಮಿಕರು ಸೇರಿಕೊಂಡಿದ್ದಾರೆ. ಮೊದ ಮೊದಲು ಕಾಫಿ ಹಣ್ಣು ಕೊಯ್ಲು ಸಂದರ್ಭದಲ್ಲಿ ಬಂದು ಕೆಲಸ ಮಾಡಿ ಹಿಂತಿರುತ್ತಿದ್ದ ಆ ರಾಜ್ಯದ ಜನರು ಈಗ ಕೆಲ ವರ್ಷಗಳಿಂದ ಕುಟುಂಬ ಸಮೇತರಾಗಿ ಬಂದು ತೋಟಗಳಲ್ಲಿ ನೆಲ್ಲೆಸಿದ್ದಾರೆ.
ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದ್ದರಿಂದ ಕಾರ್ಮಿಕರ ಕೊರತೆ ಎದುರಿಸುತ್ತಿದ್ದ ಕಾಫಿ ತೋಟಗಳ ಮಾಲಿಕರಿಗೆ ಕೊಂಚ ಅನುಕೂಲವಾಗಿ ಸಮಯಕ್ಕೆ ಕೆಲಸಗಳು ಆಗುತ್ತಿದೆ. ಕಾಫಿ ತೊಟಗಳ ಹಾಗೂ ಮಾಲಿಕರ ಹಿತ ದೃಷ್ಥಿಯಿಂದ ಇದು ಕೊಂಚ ಸರಿ ಎಚ್ಚಿಸುತ್ತದೆ. ಆದರು ಹಲವು ರೀತಿಯ ಸಮಸ್ಯೆಗಳು ಅಸ್ಸಾಂ ಮೂಲದ ಜನರಿಂದ ಉಂಟಾಗುತ್ತಿದ್ದು ಎಚ್ಚರಿಕೆ ಕೂಡ ವಹಿಸಬೇಕಿದೆ.
ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣ ಅಗತ್ಯ: ಮಕ್ಕಳು ಯಾವ ರಾಜ್ಯದವೆರೆ ಆಗಲಿ ಅವರು ಶಿಕ್ಷಿತರಾದರೆ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಗಲು ಸಾಧ್ಯವಿದೆ. ಆದರೆ ಅಸ್ಸಾಂ ರಾಜ್ಯದಿಂದ ಕೆಲಸಕ್ಕೆ ಬಂದಿರುವ ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸದೆ ಕೆಲವರು ಕೆಲಸಕ್ಕೆ ಬಿಟ್ಟಿದ್ದಾರೆ. ಇನ್ನೂ ಕೆಲವರ ಮಕ್ಕಳು ಇತರೆ ಮಕ್ಕಳೊಂದಿಗೆ ಆಟವಾಡಿಕೊಂಡು ಸಮಯ ಕಳೆಯುತ್ತಿದ್ದಾರೆ. ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಸಿರವಾಸೆ, ಜಾಗರ, ಜೋಳದಾಳು, ದಾಸರಹಳ್ಳಿ, ಹಳ್ಳಿ ತಗ್ಗು, ಬೈನೆಕೋಲ್, ಅರಿಶಿಣಗುಪ್ಪೆ, ಆಲ್ದೂರು, ಬನ್ನೂರು, ಆಗಳ, ಹಂಗರವಳ್ಳಿ, ನೆರಿಗುಡ್ಡೆ, ಬೆಟ್ಟದ ಮರಡಿ, ಕೆರೆಮಕ್ಕಿ, ಕೆಳಗೂರು ಸೇರಿದಂತೆ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಕಳಸ ತಾಲೂಕುಗಳ ಸಾಕಷ್ಟು ಕಾಫಿ ತೋಟ, ಹೋಂ ಸ್ಟೆ ರೆಸಾರ್ಟ್ ಮತ್ತು ನಗರ ಪ್ರದೇಶದ ಕೆಲವೆಡೆ ಆಸ್ಸಾಂ ಕಾರ್ಮಿಕರು ಕೆಲಸ ಮಾಡಿಕೊಂಡಿದ್ದಾರೆ. ಬಹುತೇಕ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಪತ್ರಿಕೆ ಹೊರಟಾಗ ಒಂದಷ್ಟು ವಿಚಾರಗಳನ್ನು ಅಸ್ಸಾಂ ಕಾರ್ಮಿಕರ ಮಕ್ಕಳು ತಿಳಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬೈನೆಕೋಲು ಗ್ರಾಮದಲ್ಲಿ ಸುಮಾರು 12 ವರ್ಷದ ಬಾಲಕ ಧನ ಕರುಗಳನ್ನು ಮೇಯಿಸುತ್ತಿದ್ದು, ಶಾಲೆ ಬಗ್ಗೆ ಪ್ರಶ್ನಿಸಿದಾಗ ಶಾಲೆಗೆ ಹೋಗುವುದಿಲ್ಲ ನಿತ್ಯ ಹಸು ಮೇಯಿಸುವುದಾಗಿ ಹೇಳಿದ್ದಾನೆ. ಮತ್ತೊಂದು 4 ಹುಡುಗರ ಗುಂಪು ಹಸು ಕರು ಮೇಯಿಸುತ್ತ ಆಟವಾಡುತ್ತಿದ್ದು, ಇವರ ಶಿಕ್ಷಣದ ಬಗ್ಗೆ ಪ್ರಶ್ನಿಸಿದಾಗ ರಾಜೇಶ್ ಎಂಬ ಹುಡುಗ ಅಸ್ಸಾಂನಲ್ಲಿ ಶಾಲೆಗೆ ಹೋಗುತ್ತಿದೆ. ಇಲ್ಲಿ ಬಂದ ಮೇಲೆ ಶಾಲೆ ಬಿಟ್ಟಿದ್ದು ಕಲಸಕ್ಕು ಹೋಗುತ್ತಿಲ್ಲ ಮನೆಯಲಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಅಸ್ಸಾಂ ರಾಜ್ಯದಿಂದ ಚಿಕ್ಕಮಗಳೂರಿಗೆ ಸುಮಾರು 30 ಕ್ಕು ಅಧಿಕ ಜನರು ಕುಟುಂಬಗಳು ಒಟ್ಟಿಗೆ ಬಂದಿದ್ದೇವೆ ಸಾಕಷ್ಟು ಮಕ್ಕಳು ಬಂದಿದ್ದಾರೆ ವಿವಿಧ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದು ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ತಿಳಿಸಿದ್ದಾನೆ.
ಸಾಕಷ್ಟು ಕಡೆ ತೋಟಗಳ ಮಾಲಿಕರು, ಸಿಬ್ಬಂದಿಗಳು ಶಾಲೆಗೆ ಮಕ್ಕಳನ್ನು ಸೇರಿಸುವಂತೆ ತಿಳಿ ಹೇಳಿದರು ಪೋಷಕರು ಮಕ್ಕಳನ್ನು ಶಾಲಾ ಕಾಲೇಜಿಗೆ ಪುಟ್ಟ ಮಕ್ಕಳನ್ನು ಅಂಗನವಾಡಿಗಳೀಗೆ ಕಳಿಸಲು ಹಿದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ಭಾಷೆ ತಿಳಿಯುವುದಿಲ್ಲ. ಶಾಲೆಗೆ ಬೇಡ ಸ್ವಲ್ಪ ದೊಡ್ಡವರಾದ ಮೇಲೆ ಕೆಲಸಕ್ಕೆ ಹಾಕುತ್ತೇವೆ. ಸಮಸ್ಯೆಗಳಿವೆ ಹೆಚ್ಚು ಹಣ ದುಡಿಯಬೇಕು ಎಂಬೆಲ್ಲ ಸಬೂಬು ಹೇಳುತ್ತಾರೆ. ಹೀಗೆ ನಾನಾ ಕಾರಣಗಳಿಂದ ವಿಧ್ಯೆ ಕಲಿಯುವ ಸಮಯದಲ್ಲಿ ಕೆಲ ಮಕ್ಕಳು ಕೂಲಿ ಮಾಡುತ್ತಿದ್ದರೆ ಕೆಲವರು ಸಮಯ ವ್ಯರ್ಥ ಮಾಡುತ್ತಿದ್ದಾರೆ.
ದುಶ್ಚಟಗಳತ್ತ ಯುವಕರು: ಕೆಲ ಮಕ್ಕಳು ಮನೆಗಳಲ್ಲಿ ತೋಟಗಳ ಲೈನುಗಳಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದು ದುಶ್ಚತಗಳತ್ತ ವಾಲುತ್ತಿದ್ದಾರೆ. ಬೀಡಿ ಸೇದುವುದು, ಮೊಬೈಲು ಗೇಮ್ ಆಡುವುದು, ಬೆಟ್ಟಿಂಗ್ ಕಟ್ಟುವುದು ಇತ್ಯಾಧಿಗಳು ಶಾಲೆ ಇಲ್ಲ, ಶಿಕ್ಷಣವು ಇಲ್ಲ ಉತ್ತಮ ಜನರ ಒಡನಾಟವು ಇಲ್ಲದೆ ಸಮಾಜದಲ್ಲಿ ಕೆಟ್ಟ ಚಟಗಳತ್ತ ಯುವ ಜನತೆ ವಾಲುತ್ತಿರುವುದು ಅಪಾಯಕಾರಿಯಾಗಿದೆ,
ಇದರ ಜೊತೆಗೆ ಕೆಲವ್ರು ಕ್ರಿಮಿನಲ್ ಹಿನ್ನಲೆ ಉಳ್ಳವರು ಕೂಡ ಈ ಭಾಗದಲ್ಲಿ ನೆಲೆಸಿದ್ದು ಕೆಲವೆಡೆ ತಮ್ಮ ದರ್ಪ ತೋರಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಸಿರವಾಸೆ ಗ್ರಾಮದ ಬಳಿ ಜೀಪು ಚಾಲಕನೊಬ್ಬನಿಗೆ ಅಸ್ಸಾಂ ಕಾರ್ನ್ಮಿಕರು ಥಳಿಸಿ ಚಾಕು ಇರಿದ ಘಟನೆ ನಡೆದಿತ್ತು ಹಾಗೆ 2022 ರಲ್ಲಿ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಹ್ಯಾರಿಸ್ ಎಂಬುವರ ತೋಟದಲ್ಲಿ ಆದ್ವಾನ್ಸ್ ಪಡೆದು ಕೆಲಸ ಮಾಡದನ್ನು ಪ್ರಶಿನಿಸಿದಕ್ಕೆ ಮಾಲಿಕನ ಮೆಲ್ಯೆ ಸುಮಾರು ಏಳೆಂಟು ಮಂದಿ ಕಾರ್ಮಿಕರು ಮಚ್ಚು ದೊಣ್ಣೆಗಳಿಂದ ಹಲ್ಲೆಗೆ ಮುಂದಾಗಿದ್ದು ಮಾಲಿಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆಗಳು ಗೊತ್ತು ಗುರಿ ಇಲ್ಲದ ಜನರಿಂದ ಉಂಟಾಗುವ ಅಪಾಯಗಳ ಉದಾಹರಣೆಗಳಾಗಿವೆ. ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಅಸ್ಸಾಂ ಮೂಲದರೆನ್ನಲಾದ ಅಪರಿಚಿತ ಜನರ ಒಡಾಟವಿದ್ದು ಈ ಅಪರಿಚಿತರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಬೇಕಿದೆ.
ಅಸ್ಸಾಂ ಜನರೊಂದಿಗೆ ಬಾಂಗ್ಲ ಪ್ರಜೆಗಳ ಗುಮನಿ: ಕೆಲ ತೋಟಗಳಲ್ಲಿಅಸ್ಸಾಂ ನಾಗರಿಕರೊಂದಿಗೆ ಬಾಂಗ್ಲ ಪ್ರಜೆಗಳು ಇರುವ ಗುಮಾನಿಯನ್ನು ಸ್ಥಳಿಯ ನಾಗರಿಕರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಿರವಾಸೆ ಗ್ರಾಮದ ಬಸ್ ನಿಲ್ದಾಣದೊಳಗೆ ದಿನಾಂಕ 24. ಶನಿವಾರ ಮಲಗಿದ ವ್ಯಕ್ತಿಯೊಬ್ಬ ಕಂಡು ಸ್ಥಳಿಯರು ಪ್ರಶ್ನಿಸಿದಾಗ ತಾನು ಬಾಂಗ್ಲಾದಿಂದ ಒಬ್ಬನೆ ಬಂದಿದಾಗಿ ತಿಳಿಸಿದ್ದಾನೆ. ಮತ್ತಷ್ಟು ಜನರು ಬಂದಾಗ ಬಾಂಗ್ಲಾ ಅಲ್ಲ ಅಸ್ಸಾಂ ರಾಜ್ಯದಿಂದ ಬಂದಿದ್ದೇನೆ ಎಂದು ಹೇಳಿ ಅಲ್ಲಿಂದ ಕಾಲ್ತಿತಿದ್ದಾನೆ. ಸಾಕಷ್ಟು ಕಡೆ ಈ ರೀತಿ ಅಸ್ಸಾಂ ಜನರೊಡೆನೆ ಬಾಂಗ್ಳಾ ಪ್ರಜೆಗಳು ಇರುವ ಶಂಕೆ ವ್ಯಕ್ತವಾಗುತ್ತಿದೆ. ತೋಟಗಳಲ್ಲಿ ಮಾಲಿಕರು ಮ್ಯಾನೆಜರು ಕೆಲಸಕೆ ಬಂದ ಪ್ರತಿಯೊಬ್ಬ ಕಾರ್ಮಿಕನ ಅಧಾರ್ ಕಾರ್ಡ್ ಇತರೆ ದಾಖಲಾತಿಗಳನ್ನು ಪಡೆದು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಜಿಲ್ಲಾಡಲಿತ ಕೂಡ ಈ ಬಗ್ಗೆ ಕಟ್ಟು ನಿಟ್ಟಿನ ಆದೇಶ ಮಾಡಿದೆ. ಆದರು ಕೆಲವೆಡೆ ಅಸ್ಸಾಂ ಕಾರ್ಮಿಕರು ಎಂದು ಹೇಳಿಕೊಂಡು ಬಾಂಗ್ಳಾದವರು ನಕಲಿ ಗುರುತಿನ ಚೀಟಿ ಪಡೆದು ಬಂದಿದ್ದಾರೆಂಬ ಗುಮಾನಿಯನ್ನು ಸ್ಥಳಿಯರು ವ್ಯಕ್ತಪಡಿಸಿದ್ದಾರೆ ಸಾಕಷ್ಟು ಕಡೆ ಈ ಕಾರ್ಮಿಕರು ತಮ್ಮ ಮೂಲದಾಖಲಾತಿಗಳನ್ನು ತೋರಿಸುವುದಿಲ್ಲ ಮತ್ತು ಸರಿಯಾಗಿ ಮಾಹಿತಿ ನೀಡುವುದಿಲ್ಲ ಹಾಗಾಗಿ ಗುಮಾನಿ ಹೆಚಾಗಿದೆ. ಹಾಗಗಿ ಜಿಲ್ಲೆಯಲ್ಲಿ ಕಾಫಿ ತೋಟಗಳ ಮಾಲಿಕರು ಸೇರಿ ಇತರರು ಕೂಡ ಅಪರಿಚಿತರನ್ನು ಕೆಲಸಕ್ಕಿಟ್ಟುಕೊಳ್ಳುವಾಗ ಸರಿಯಾದ ದಾಖಲಾತಿ ಪಡೆದು ಸ್ಥಳಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅಲ್ಲದೆ ಈ ಕಾರ್ಮಿಕರಿಗೆ ಸಂಬಂದಿಸಿದ್ದಂತೆ ಅಪರಿಚಿತರೊಡನೆ ಯಾವುದೆ ಹಣಕಾಸಿನ ಹಾಗು ಇತರೆ ವ್ಯವಹಾರ ನಡೆಸುವಾಗ ಮನೆಗಳ ಬಳಿ ಕರದೊಯ್ಯುವಾಗ ಎಚ್ಚರ ವಹಿಸುವುದು ಸೂಕ್ತ. ಹಾಗೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆಧ್ಯತೆ ನೀಡುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಅದಲ್ಲದೆ ಮುಖ್ಯವಾಗಿ ಕೆಲಸ ಆಗಲಿ ಎಂಬ ಒಂದೆ ಕಾರಣಕ್ಕೆ ಸಿಕ್ಕ ಸಿಕ್ಕವರನ್ನು ಕರೆದುಕೊಂಡರೆ ಮುಂದೆ ಸಮಸ್ಯೆ ಉಂಟಾಗಬಹುದು.
ಹೇಳಿಕೆ
ನಮ್ಮ ಸುತ್ತ ಮುತ್ತ ಕೆಲವೆಶ ಅಸ್ಸಾಂ ಮೂಲದವೆರೆಂದು ಹೇಳುವ ಜನರು ಸರಿಯಾದ ದಾಖಲೆ ತೋರಿಸದೆ ಮರೆ ಮಾಚುತ್ತಾರೆ. ಇವರ ಮಕ್ಕಳೀಗೆ ಶಿಕ್ಷಣ ಕೂಡ ಇಲ್ಲ ಪೋಷಕರೆ ಶಾಲೆಗೆ ಕಳಿಸುವುದಿಲ್ಲ. ಆ ಭಾಗದ ಸಾಕಷ್ಟು ಅಪರಿಚಿತರು ಈ ಭಾಗದಲ್ಲಿ ಓಡಾಡುತ್ತಾರೆ.
ಲಕ್ಷ್ಮಣ್. ಸಿರವಾಸೆ
ಚಿತ್ರ : ಚಿಕ್ಕಮಗಳೂರು ತಾಲೂಕು ಬೈನೆಕೋಲು ಗ್ರಾಮದಲ್ಲಿ ಧನ ಕರು ಮೇಯಿಸುತ್ತಿರುವ ಅಸ್ಸಾಂ ಕಾರ್ಮಿಕರ ಮಕ್ಕಳು