ಪ್ರತಿನಿಧಿ ವರದಿ ದೇವನಹಳ್ಳಿ
ಇತ್ತೀಚೆಗೆ ಬುಲೆಟ್ ಬೈಕ್ಗಳಿಗೆ ಪುಲ್ ಡಿಮ್ಯಾಂಡ್ ಬಂದ ಸಂದರ್ಭದಲ್ಲಿ ಸಿಕ್ಕಿ ಸಿಕ್ಕಲ್ಲಿ ಬುಲೆಟ್ ವಾಹನಗಳು ಮಾಯಾವಾಗುತ್ತಿದ್ದವು. ಇದೀಗ ಆರ್ಎಕ್ಸ್ ಯಮಹಾ ಬೈಕ್ಗಳಿಗೆ ಡಿಮ್ಯಾಂಡ್ ಬಂದಿದೆ. ಇದರಿಂದ ಖದೀಮರು ಆರ್ಎಕ್ಸ್ ಬೈಕ್ ಕಳ್ಳತನ ಮಾಡೋವುದು ಹೆಚ್ಚಾಗಿದೆ. ಎಚ್ಚೆತ್ತುಕೊಂಡ ಪೋಲಿಸರು ಆರ್ಎಕ್ಸ್ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ.
ತಾಲ್ಲೂಕಿನ ವಿಶ್ವನಾಥಪುರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಓರ್ವ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಚಿಕ್ಕಬಳ್ಳಾಪುರ ಜಿಲ್ಲೆಯ ನೆಲಮಾಕನಹಳ್ಳಿ ಗ್ರಾಮದ 25 ವರ್ಷದ ಸಾಗರ್ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಯಿಂದ 4ಆರ್ಎಕ್ಸ್ ಮತ್ತು ಎರಡು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ.
ತಾಲೂಕಿನ ಕೊಯಿರಾ ಗ್ರಾಮದ ಮನೋಜ್ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ವಿಶ್ವನಾಥಪುರ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಭೇದಿಸುವಲ್ಲಿ ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಎಎಸ್ಐ ಹರೀಶ್, ಹೆಡ್ಕಾನ್ಸ್ಟೇಬಲ್ ಸಿದ್ದಪ್ಪ, ಕಾನ್ಸ್ಟೇಬಲ್ ಶಂಭುಲಿಂಗ, ಸಂತೋಷ್, ಅಶೋಕ್, ಸುದೀರ್, ಪುಂಡಲಿಕ್, ಪ್ರಕಾಶ್, ಡ್ರೈವರ್ ಉಮೇಶ್ ಯಶಸ್ವಿಯಾಗಿ ಕಾರ್ಯ ಚರಣೆ ನಡೆಸಿದ್ದಾರೆ.
31ಡಿಎಚ್ಎಲ್ ಪಿ-೧: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ.